ನಂಜು

ಹುಚ್ಚು ಮನಸ್ಸಿನ ಮರ್ಕಟ
ಮೃಗಗಳ ಬಂಧಿಸಿ ನೋಡುವ ನೋಟ
ಬಂದಾಗ ಅವನಿಗೆ ನಂಜಿನ ಕಾಟ
ತನ್ನ ಗೂಡೊಳು ತಾನಿರಲು ಅವನಿಗೇ ಸಂಕಟ ?

ಪ್ರಕೃತಿ ಎದುರು ವಿಕೃತಿ ಮೆರೆವ ಮನುಷ್ಯ
ಅವನ ಅಳಿಸಲು ಪ್ರಕೃತಿಗೆ ಸಾಕು ನಿಮಿಷ
ಸ್ವಾರ್ಥದ ಬದುಕಿಗೇಕೆ ಇಷ್ಟು ಆವೇಷ
ಸಾವಿನಂಚಿನಲೂ ಜಾತಿ, ಮತಗಳ ಸಂಘರ್ಷ

ಬಿತ್ತಿ ಹೋದವರು ಯಾರೋ ಮನುಜ
ಜಾತಿ, ಮತ, ಭೇದಗಳೆಂಬ ವಿಷ ಬೀಜ
ಬೆಳೆದು ಹಣ್ಣಾಗಿದೆ ತಿಂದವ ಕಕ್ಕುವನು ವಿಷ.. ಸಹಜ
ವಿಷ ವೃಕ್ಷವ ಕಡಿಯದೆ ಹಣ್ಣ ತಿಂದವನಿಗೇಕೆ ಸಜ?

ಅವಿವೇಕದಿಂದ ಅವನತಿಗೆ
ಆವೇಶದಿಂದ ವಿನಾಶದಂಚಿಗೆ
ಕೊಂಡೊಯ್ಯುವರು ಮನುಕುಲವ ಮೆರವಣಿಗೆ
ಮಾಡಿಕೊಂಡಂತೆ ಸಿದ್ಧತೆ ತಮ್ಮ ಶವ ಯಾತ್ರೆಗೆ

- Tribhuvan

07 Apr 2020, 04:27 am
Download App from Playstore: