ಮಾರ್ದನಿ
ಕೇಳಯ್ಯ ಓ ಮನುಜ ಹೇಳುವೆ ಕಥೆಯನೊಂದನು
ನೊಂದು ಬೆಂದ ಹೃದಯದಾ ವ್ಯಥೆಯನೊಂದನು
ಅಳಿಯುತಿಹುದು ಜೀವರಾಶಿ ನಿನ್ನ ನಿತ್ಯ ಕರ್ಮದಿ
ಮೆರೆಯುತಿಹುದು ನಿನ್ನ ಮನವು ರಾಗ ದ್ವೇಷದಿ
ಇರುವುದೆಲ್ಲ ನನಗೇ ಎಂಬ ಹಾಳು ಸ್ವಾರ್ಥದಿ
ಮೆರೆಯುತಿರುವೆ ಜಗಕೆ ನಾನೇ ಒಡೆಯನೆಂಬ ಭಾವದಿ
ಬಂದಿರುವೆ ಧರೆಗೆ ನೀನು ಬುದ್ಧಿವಂತ ಮೆದುಳಲಿ
ಬದುಕು ನೀನು ಜಗದಲಿ ಮನದ ತುಂಬಾ ಖುಷಿಯಲಿ
ಪರ ಜೀವಿಯೂ ಉಳಿಯಲಿ ನರಳದಿರಲಿ ನೋವಲಿ
ಅಮರನಲ್ಲ ಇಲ್ಲಿ ನೀ ಕರುಗುವೆ ಕೊನೆಗೆ ಕಲ್ಲು ಮಣ್ಣಲಿ
ಕಿವುಡನಾದೆ ಅನ್ಯ ಜೀವದಾರ್ತನಾದ ಕೇಳಲು
ವೇದನೆಯಲಿ ನರಳುತಿಹವು ತಮ್ಮನೋವ ಹೇಳಲು
ಅಂಕೆಯಿರದ ಮಂಕನಾದೆ ಪರರ ಮನದ ನೋವ ತಿಳಿಯಲು
ಹೊರಟೆ ನೀ ಭ್ರಮೆಯ ಹಿಂದೆ ಸುಖವನೊಂದ ಅರಸಲು
ಕ್ಷಣಿಕ ಅಣುವೋ ನೀನು ಒಡೆಯನಲ್ಲ ಈ ಜಗಕೆ
ಇದನು ಮರೆತು ಮೆರೆದರೆ ಬೀಳುವುದು ಕುಣಿಕೆ
ನಿಯಮ ಮೀರಿ ಬದುಕಿದರೆ ಸೇರುವೆ ನೀ ಮಸಣಕೆ
ಅಳಿವ ಮೊದಲೇ ಮರಳು ನೀ ಉಳಿವ ಮಾರ್ಗಕೆ
- KN PATIL
11 Apr 2020, 02:30 pm
Download App from Playstore: