ಜೈ ಭೀಮ್
ಮರಳಿ ಬಾರೆಯ
ದೇವ ಮಾನವ
ದೇಶ ಎತ್ತಲೋ ಸಾಗುತಿಹುದು
ಮರಳಿ ಕತ್ತಲಾಗುತಿಹುದು
ಬಡವ ಬಡವನಾಗೆ ಇರುವನು
ಲಕ್ಷ್ಮಿ ಸಿರಿವಂತನಿಗೆ ಒಲಿದಿಹಳು
ಕಿತ್ತು ತಿನ್ನುವ ಬಡತನದಲ್ಲಿ
ಬಡವನಿಗೆಲ್ಲಿ ಸರಸ್ವತಿ ಸಿಗುವಳು
ಯಾರಿಗಾಗಿ ನೀ ಹೋರಾಡಿದೆಯೋ
ಅವರು ಅಲ್ಲೇ ಇದ್ದಾರೆ
ದೇಶಕ್ಕಾಗಿ ನೀ ಬರೆದಿದ್ದನ್ನ
ತಿದ್ದಲು ಸಂಚು ರೂಪಿಸಿದ್ದಾರೆ
ಮರಳಿ ಬಂದುಬಿಡು ದೇವಾ
ರಕ್ಷಿಸಲು ಕೋಟಿ ಬಡಜನರ ಜೀವಾ
ಸತೀಶ್ ಕಳುವರಹಳ್ಳಿ(ಜೈ ಭೀಮ್ )
- ಸತೀಶ್ ಕುಮಾರ್ ಕಳುವರಹಳ್ಳಿ
13 Apr 2020, 11:21 pm
Download App from Playstore: