ಮತ್ತೆ ವಸಂತ.......

ಜಗವೆಲ್ಲ ಅಳುತಿಹುದು
ಮನಸೆಲ್ಲ ನರಳುತಿಹುದು
ತಾನೆ ದೊಡ್ಡವನೆಂದು ಮೆರೆದು
ಬದುಕುತಿದ್ದ ಮನುಜನ
ಅಹಂಕಾರವ ಮೆಟ್ಟಿನಿಂತು.....

ಮದದಿಂದ ಮೆರೆದಿರುವ
ಮನುಜನ ಅಂದಕಾರವ ತೊರೆದು
ನಿನ್ನಿಂದ ನಾನಲ್ಲ ನನ್ನಿಂದ ಜಗವು ಎಂದು
ಮತ್ತೆ ಮತ್ತೆ ಸಾರುತಿದೆ ಈ ಕಾಲ.....

ಮನುಜನ ಬುದ್ದಿವಂತಿಕೆ ಅತಿಯಾಗಿ
ಜಗವೆ ತಲ್ಲಣಗೊಂಡು ಅಳುಕುತಿರುವಾಗ
ಹೀಗೊಂದು ಒಣಗಿ ಬಿದ್ದ ಮರದೊಳಗೆ ಮತ್ತೆ ಚಿಗುರಿ ಅರಳಿದ ಹೂವೊಂದು ನುಡಿಯುತ್ತಿತ್ತು.....

ನಿನೆಷ್ಟೆ ಬೆಳೆದು ಮೆರೆದರು
ನನ್ನ ಮುಂದೆ ತಲೆ ಬಾಗಲೆಬೇಕು
ನನ್ನ ತನವನ್ನು ನಾನೆಂದು ಬಿಡೆನು
ನಾನು ಮತ್ತೆ ಮರಳಿ ಪಡೆದು ಕೊಳ್ಳುವೆ ತನ್ನ ತನವನ್ನು ಎಂದು ಪ್ರಕ್ರೃತಿ ನಗನಗುತ ಅರಳಿ ಮನುಜನ ಅಹಂಕಾರಕ್ಕೆ ಪೆಟ್ಟೊಂದು ಕೊಟ್ಟು ಬುದ್ದಿಮಾತನ್ನು ಹೇಳುತ್ತಿದೆ......‌‌‌‌...
ಈ ಪರಿಯ ಸೋಬಗು.......
ಜಗದ ಅಳುವಲ್ಲಿ ಜನರ ಕರ್ಮುಪಲವೆ ತುಂಬಿದೆ ಅರಿತು ಬಾಳು ನೀ ಓ ಮನುಜ........

- ರಾಗಸಿರಿ....

16 Apr 2020, 03:36 pm
Download App from Playstore: