ಶೃಂಗೇರಿಯ ಸಿರಿ
ಬೆಳಕು ಹರಿಯಿತು ಗುಡಿಯು ತೆರೆಯಿತು
ಭಕ್ತಿ ಸಾಗರ ಸೇರಿತು
ದೀಪ ಬೆಳಗಿಸಿ ಪಾಪ ಕಳೆಯಲು
ಶಾರದೆ ಸನಿಹಕೆ ಬಾರೆಯಾ
ತಾಯೇ ತುಂಗೆಯು ಶಾಂತಿ ತೋರಿ
ಸಕಲ ಜಲಚರ ಬದುಕಿಸಿ
ಅಳುವ ಕಂದಗೆ ಹಾಲನುಣಿಸುವ
ತಾಯಿ ನಲಿವಳು ಮುದ್ದಿಸಿ
ಮಂದಹಾಸದಿ ಭಕ್ತರ ಹರಸುವ
ಕಠಿಣ ತಪಸ್ಸಿನ ಸದ್ಗುರು
ಮಿನುಗು ತಾರೆಯ ನಡುವೆ ಶಶಿಯು
ಹೊಳೆವ ಹೊಳಪಿನ ಹಂದರು
ತಾಯೇ ಶಾರದೆ ಲೋಕಪೂಜ್ಯಳೇ
ನಿನ್ನ ಶಿಷ್ಯರ ವೇದ ಪಠಣವು
ಉದಯ ಕಾಲದಿ ರವಿಯ ಕಿರಣವು
ಭುವಿಯ ಮುಟ್ಟುವ ತವಕವು
ತುಂಗಾ ತಟವು ಹಸಿರು ವನವು
ಸುತ್ತ ಮುತ್ತಲು ಸುಂದರ
ವಿದ್ಯಾಮಾತೆಯ ಸನಿಹ ಕಳೆದ
ಶಾಂತ ಸಮಯ ಪಾವನ
- ಕುಂತೂರು ತ ಸುಬ್ರಹ್ಮಣ್ಯ
ಶೃಂಗೇರಿ
9482119447
- Subramanya K T
13 Jun 2020, 08:34 pm
Download App from Playstore: