ಸಾವು ಸಾವು

ಸಾಗಿಹುದು ಮೆರವಣಿಗೆ
ಮಸಣದ ಹಾದಿಯಲ್ಲಿ
ಸುಮಭರಿತ ಪುಷ್ಪಗಳ
ಸಿಂಗರಿಸಿದೆ ಮರದ ತೇರು
ನಲಿಸಿ ಅಳಿಸಿ ಮಲಗಿಹನು
ಧೀರ್ಘಕಾಲದ ನಿದಿರೆಲೀ
ಜೀವನವಿಡೀ ಕೊಂದವರೆಲ್ಲ
ನಡೆ ನುಡಿ ಕಾರ್ಯಗಳೊಲ್
ಹೋದಾಗ ಕೊರಗುವರಯ್ಯ
ಬಣ್ಣದ ಲೋಕದ ಬದುಕಲ್ಲಿ
ಯಾರೂ ಇಲ್ಲ ಒಡನಾಡಿಗಳು
ಎಲ್ಲ ಭವಬಂಧನ ತೊಡೆದು
ಶಾಂತವಾಗಿಹುದು ಹೃದಯ...!!

- Yashaswi Gowda

20 Jun 2020, 08:25 pm
Download App from Playstore: