ಪ್ರಕೃತಿ

ನನ್ನ ಮೌನವು ಮಾತನಾಡಿದೆ ಇಂದು ನಿನ್ನ ಕಂಡು
ಮನವಿಂದು ತಂಪಾದ ಗಾಳಿಯ ಸಿಹಿಯ ಉಂಡು
ಬರೆಯಲು ಪದಗಳು ಸಾಲದು ನಿನ್ನ ಕಂಡು
ಬರೆಯಬೇಕೆನಿಸಿದೆ ನಿನ್ನ ಸೌಂದರ್ಯ ಕಂಡು

ಈ ಪ್ರಕೃತಿ ಸೌಂದರ್ಯದ ಗಣಿ
ರೆಕ್ಕೆ ಪುಕ್ಕವಿಲ್ಲದ ಬಂಗಾರದ ಗಿಣಿ
ನೋಡಲು ಸಾಲದು ಎರಡು ನಯನ
ಓ ವಸುಂದರೆ ನಿನ್ನ ನೋಡಲು ಶಾಂತವಾಗುವುದು ಮನ

ಜಾರಿಬಿದ್ದ ಕೂಡಲೆ ಹಾರಿಹೋಗುವ ಹಕ್ಕಿಗಳು
ಹಚ್ಚಹಸಿರಾಗಿ ತೂಗಾಡುತ್ತಿರುವ ಗಿಡಮರಗಳು
ರೆಕ್ಕೆ ಬಿಚ್ಚಿ ಕುಣಿಯುವ ನವಿಲುಗಳು
ನಾದಸ್ವರದಿ ಹಿತನೀಡುವ ಕೋಗಿಲೆಗಳು
ಓ ಮನುಕುಲವೇ ನಾಶವಾಗುತ್ತಿದೆ ಪ್ರಕೃತಿ ನಿನ್ನ
ಹುಚ್ಚಾಟತನದಿಂದ

ಮುರುಕಲು ಮನಸ್ಸಿನ ಹರಕು ಮಾನವರೆ
ಉಸಿರು ಕೊಡುವ ಹಸಿರಿಗೆ ಕೊಡಲಿ ಏಟು ಹಾಕುವಿರಿ
ಜೀವಜಲಕ್ಕೆ ವಿಷವ ಬೆರಿಸಿ ಸಾಧನೆಯೆಂದು ಮೆರೆವಿರಿ
ಸಹನಾಮೂರ್ತಿ ವಸುಂದರೆ ವಿಷವನುಂಡು ಅಮೃತ ನೀಡುವಳು ತಿಳಿಯಿರಿ
ಸಮೀಪಿಸುತ್ತಿದೆ ಕೇಡುಗಾಲ ಇದನ್ನರಿತು ನಡೆಯಿರಿ
Written By :- M.S Yadav

- M S Yadav

13 Jul 2020, 02:32 pm
Download App from Playstore: