ರೈತ
ಅನ್ನಕ್ಕಾಗಿ ಸನ್ನಾಗಿ ಹೋದ
ಬಡವ ರೈತನ ನೋಡಿರಣ್ಣ
ಹರಕ ದೋತರ ಊಟಗೊಂಡು
ಹೊಲದಲಿ ಗಿರಕಿ ಹೊಡಿತಾನಲ್ಲ . "ಪ"
ಬಿಸಿಲಿನ ಒಳಗ ಎತ್ತಿನ ಜೋಡಿ
ಕತ್ತಿಯಾಗಿ ದುಡಿತಾನಲ್ಲ
ಹೊತ್ತು ಮುಳುಗುವ ತನಕ
ಉತ್ತುತ ಬೆವರ ಸುರಿಸುವನಲ್ಲ. ಚ(೧)
ಅಜ್ಜನು ಮಾಡಿದ ಸಾಲವ ಕೀಳಲು
ಜೀತವ ದುಡಿದಾನಲ್ಲ ,ಅಪ್ಪ
ಮನೆಗೆ ಬಂದರೆ ಕಟಗ ರೊಟ್ಟಿ
ಕಡಿದು ತಿನ್ನುತಾನಲ್ಲ (೨)
ಬಣ್ಣವು ಸುಟ್ಟು ಬಿಳಿಯ
ಕಣ್ಣುಗಳು ಕುಕ್ಕುತ ಲಿಹುದಲ್ಲ
ಪಕ್ಕಡೆ ಯೊಳಗಿನ ದಪ್ಪನೆ ಎಲುಬು
ಕಿತ್ತು ಬರುತಿಹುದಲ್ಲ ,ಅಯ್ಯೋ..! (೩)
ಹೊತ್ತ ಹೊಂಟರ ಜತ್ತಗಿ
ಬಾರಿಕೊಲ ಹೆಗಲಿಗೆ ಬಂತಲ್ಲ
ಶಿವನ ನೆನೆಯುತ ಹೋಲಕಡೆ
ಸಾಗಿ ಕಾಯಕ ಮೇರಿಯುತಾನಲ್ಲ. (೪)
ಕಲ್ಮೇಶ ಬಡಿಗೇರ
9743539657
..........ಬಾದಾಮಿ.....
- Kalmesh Badiger
25 Jul 2020, 02:18 pm
Download App from Playstore: