ಸಾಹಿತ್ಯ ಸಂಜೀವಿನಿ -ಮುಕ್ತ - ವಿಮುಕ್ತ
ಎಂದಿಗಯ್ಯ ಎಂದಿಗೆ ಕಾಲ ಯಮನ ಅಟ್ಟಹಾಸ ಕೊನೆಯಾಗುವುದು ಎಂದಿಗೆ???
ಸಣ್ಣ ಜೀವಿ ಸೂಕ್ಷ್ಮಜೀವಿ ಅಣುವಿನಷ್ಟು ಗಾತ್ರ ನೀನು ನಿನ್ನ ಜನನ ಅದೇ ಚೀನಾ
ಇಂಥ ಶಕ್ತಿ ಉಂಟೆ ಒಂದು ಸಣ್ಣ ಜೀವಿಗೆ?
ದಿನದಿನವು ಸಹಸ್ರ ಸಂಖ್ಯೆ ಸೋಂಕಿಗೆ!
ಪ್ರಾಣ ಹರಣ ಮಾಡಿದ್ದೊಂದೇ ಸಾಲದೆ ನಿನ್ನ ಬಯಕೆ ತೃಪ್ತಿಗೆ?
ಬದುಕಿನಲ್ಲಿ ಬವಣೆ ತಂದು ತಂದೆ ಬಾಳ ಬಂಡಿ ದುಸ್ಥಿತಿಗೆ!
ಮರೆತ ಪಾಠ ಕಲಿವ ಪಾಠ ತಂದೆ ಮನುಜ ಮತಿಗೆ
ಏನು ಹೇಳಬಯಸಿದೆ? ಯಾವ ನೀತಿ ಕಲಿಸಿದೆ?
ಏನು ನಿನ್ನ ಸಿದ್ಧಾಂತ?
ಏನು ನಿನ್ನ ರಾದ್ಧಾಂತ
ಭವ್ಯ ದೇಶ ಕಟ್ಟುವಕನಸನು ನುಚ್ಚುನೂರು ಮಾಡಿದೆ
ಕನಸು ಕಾಣೋ ಕಣ್ಮನಗಳಿಗೆ ತಣ್ಣೀರೆರಚಿದೆ?
ಕುಣಿದು ನಲಿದು ಬೆಳೆದು
ಬರುವ ಮನೆ ಮನಗಳ
ಮುಗ್ಧ ಹೃದಯ ಕುಸುಮಗಳ
ಕುಡಿಯ ಚಿವುಟಿ
ಬೀಗಮುದ್ರೆ ಹಾಕಿದೆ
ಇದು ಕಾಲ ಒಡೆಯನ ಕೋವಿಡ್ ರೂಪ
ಜೀವನ ಏರುಪೇರಿನ ಪ್ರತಿರೂಪ ಈ ಬವಣೆ ಎಲ್ಲಾ ದೇಶಗಳ ಯಥಾರೂಪ
ಲಸಿಕೆಗಾಗಿ ಕಾಯೋಣ
ಅಂತರ ಪಾಲಿಸೋಣ ಸ್ಯಾನಿಟೈಸರ್ ಬಳಸೋಣ ಶುಚಿತ್ವ ಕಾಪಾಡೋಣ
ನಿರ್ಲಕ್ಷ ಬಿಡೋಣ
ಲಕ್ಷ್ಯ ಇಡೋಣ
ಈ ಸಂಕಲ್ಪ ಮಾಡೋಣ
✍️ ನವಿಲೆ ನಾಗರಾಜು
ಕನ್ನಡ ವಿಭಾಗದ ಮುಖ್ಯಸ್ಥರು
- Naga raju
31 Jul 2020, 10:02 pm
Download App from Playstore: