ಕಂದಮ್ಮ ಕೇಳೆ..!
ಕಂದಮ್ಮ ಕೇಳೆ...!
ಮುಗ್ಗುರಿಸಿ ಬಿದ್ದು ಸಾಯಬಾರದೆ
ರೋಧನೆ ಮರೆಯಲ್ಲಿ ಮಣ್ಣಾಗಬಾರದೆ//
ಕಂದಮ್ಮ ಕಳೆ ತರುವನೆಂದು
ಕನಸು ಕಟ್ಟಿದ್ದೆ ಸೃಷ್ಠಿಕರ್ತನೆದುರು
ಬಂಜೆಯೆಂಬ ಬರಸಿಡಿಲು ಬಡಿದಿತೆ
ಸಾವೇ ಬರಬಾರದೆ ಬದುಕಿನ ಎದುರು//
ಬಯಕೆಯಿರದ ಬಸುರಿಯಾಗದ ಜನ್ಮಕ್ಕೆ
ಇದ್ದು ಸತ್ತಂತೆ ಯಾರ ಮುಂದೆ ಹೇಳಲಿ
ಅವ್ವ- ಅಪ್ಪನಿರದ ಪರದೇಶಿ ಬದುಕಲ್ಲಿ
ದೇವರ ಪರೀಕ್ಷೆಯ ನಿರೀಕ್ಷೆಗಳೆ ಅಧಿಕವಿಲ್ಲಿ//
ಕಣ್ಣೀರ ಕಡಲಲ್ಲಿ ಕರುಳು ಬತ್ತಿವೆ
ಮನಸಲಿ-ಕನಸಲಿ ಕಂದಮ್ಮ ಕಾಡುತಿದೆ
ಅತ್ತು- ಅತ್ತು ಕಣ್ಣೀರೇ ಬಸವಳಿದಿದೆ
ಎದೆ ತಬ್ಬಿ ಮುದ್ದಾಡುವೆ ಮಗು ನೆನಪಲ್ಲಿ//
ಒಲವಿಲ್ಲದ ಬದುಕಲ್ಲಿ ಅಸುನಿಗಿದೆ ನಲಿವು
ತಬ್ಬಲಿ ಕೂಗು ಕೇಳುವವರಾರು ಓ ಆತ್ಮವೆ
ಚುಚ್ಚು ಮಾತಿಗೆ ಹೆಚ್ಚಿಗೆ ಬದುಕಲಾರೆ ಮಗುವೆ
ಬಂಜೆಸಲ್ಲ ಅಡಗಲು ಜನ್ಮವೆತ್ತಿ ಬಾರೊ ಮಗುವೆ//
ಸದಾಶಿವ ಎಂ. ಮರಡಿ
ಬಾದಾಮಿ.
- SADASIVAMARADI
02 Aug 2020, 06:34 pm
Download App from Playstore: