26/11

ಬಾಂಬೆ ಎಂಬ ಹೆಸರು ನೆನೆದರೆ
ಬಹಳ ಬಯವಾಗುವುದಲ್ಲ
ಮುಗ್ಧ ಜನಗಳ ಪ್ರಾಣವ ಕೀಳುವ
ಮಹಾ ಮುಂಬೈ ಎನುವರಲ್ಲ. //

ಕ್ರೂರ ರಾಕ್ಷಸರು ನೀರಿಂದ ಬಂದು
ಮುಂಬೈ ಊರೊಳಗೆ ಹೊಕ್ಕರಲ್ಲ
ಸಿಕ್ಕವರನ್ನು ಗುಂಡಿಟ್ಟು ಕೊಲ್ಲುತಾ
ಹೆಣಗಳ ರಾಶಿ ಹಾಕಿದರಲ್ಲ. //

ಹೊತ್ತಿ ಉರಿಯಿತು ತಾಜ್ ಹೋಟೆಲ್
ಒತ್ತಿ ಯಾಯಿತೋ ನಾರಿಮನ್ ಹೌಸ್
ಸುಟ್ಟ ಹೆಣಗಳ ಕೆಟ್ಟ ವಾಸನೆಯು
ಹೊರ ಹೊಮ್ಮಿ ಬಂದಿತಲ್ಲಾ. //

ಉಗ್ರರ ಮಣಿಸಲು ದಿಟ್ಟ ಪೊಲೀಸರ
ದಂಡೆ ಸೇರಿತಲ್ಲ, ಹಗಲಿರುಳೆಲ್ಲಾ
ಹೋರಾಡಿ ಉಗ್ರರ ಮೆಟ್ಟಿ ನಿಂತರಲ್ಲ
ಸ್ವತಃ ತಾವೇ ಪ್ರಾಣ ಕೊಟ್ಟರಲ್ಲಾ. //

ಹೇಮಂತ್ ಕರ್ಕರೆ ವಿಜಯ ಸಾಲಸ್ಕರ್
ಹೋರಾಡುತ್ತಾ ಪ್ರಾಣ ಬಿಟ್ಟರಲ್ಲ
ಅಶೋಕ್ ಕಾಮ್ಟೆ ಉನ್ನಿಕೃಷ್ಣ ಕಮಾಂಡರ್
ಹೊರಾಡ್ತ ವೀರ ಮರಣ ಹೊಂದಿದ ರಲ್ಲ. //


ಕಲ್ಮೇಶ ಬಡಿಗೇರ
9743539657
. ......ಬಾದಾಮಿ.....

- Kalmesh Badiger

10 Aug 2020, 11:35 am
Download App from Playstore: