ಯಾರಿಗಾಗಿ ಹೋರಾಟ ಎಲ್ಲಿಯತನಕ

ಪರಕಿಯರ ಕಪ್ಪಿ ಮುಷ್ಟಿ ವಿರುದ್ಧ
ಜನ ಸಾಮಾನ್ಯರ ರಕ್ಷಣೆ
ಬಡವ ಬಲ್ಲಿದರ ಸಮಾನತೆ
ಮುಗ್ಧ ಸ್ತ್ರೀಯರ ಏಳಿಗೆ
ಶೋಷಿತರ ಶೋಷಣೆಯ ದಮನ
ವರ್ಣ ಬೇಧದ ನಿವಾರಣೆ
ತಾಯಿನಾಡು ತಾಯಿ ನಾಡಿನ
ಜನರಿಗಾಗಿ ನಡೆದ ಹೋರಾಟ

ಇಂದು ಬಡ ಜನರ ರಕ್ಷಣೆಗೆ ನಿಲ್ಲದ
ಡೋಂಗಿ ಜನ ನಾಯಕರ ಪ್ರತಿಷ್ಠೆಗಾಗಿ
ಅಂಧ ನಾಯಕರ ಅಸ್ತಿತ್ವಕ್ಕಾಗಿ ಗುದ್ದಡುವಾ
ಅಂಧ ಭಕ್ತರ ಕೆಸರೆರಚುವಾಟ
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ
ಜನ ಸಾಮಾನ್ಯರನ್ನು ಅತ್ತೀಕ್ಕುವ
ಭ್ರಷ್ಟಾಚಾರಿಗಳ ಭ್ರಷ್ಟಾಚಾರದ ರಕ್ಷಣೆಗಾಗಿ
ನಡೆಯುವ ಹೋರಾಟವಾಗಿದೆ

ಉಳ್ಳವರು ಇಲ್ಲದವರ ನಡುವಿನ
ತಾರತಮ್ಯ ನಿಲ್ಲುವ ತನಕ
ದೀನ ದಲಿತರು,ಸ್ತ್ರೀ ಶೋಷಿತರನ್ನು
ಕಿತ್ತು ತಿನ್ನುವ ಸಮಾಜದ ವಿರುದ್ಧ
ನಿಲ್ಲದಿರಲ್ಲಿ ನಿರಂತರ ಹೋರಾಟ
ಸಮ ಸಮಾಜ ನಿರ್ಮಾಣದ ತನಕ

- ರಾಜು ಹಾಸನ

20 Aug 2020, 10:29 am
Download App from Playstore: