ಸಂಬಂಧ

ಎಲ್ಲರೂ ಬಯಸುವರು
ಸಂಬಂಧ ಗಟ್ಟಿಯಾಗಿರಬೇಕೆಂದು..
ಆದರೆ‌ ನಾಟಕದ‌ ಬಲೆಯಲ್ಲಿ ಬಿದ್ದು ಬಿಟ್ಟರೇನೋ?
ಬಂಧ ನಿಂತಿರುವುದು
ಸಂ-ಪೂರ್ಣ ನಂಬಿಕೆ,ವಿಶ್ವಾಸದ ಮೇಲೆ..
ಮರೆತೋಗುವುದು ಇವೆಲ್ಲಾ ಸ್ವಾರ್ಥದ ಮುಂದೆ..
ಅವರ ಕಷ್ಟಕ್ಕೆ ಎಲ್ಲರ‌ನೂ ನೆನೆವರು
ಆದರೆ ನಮ್ಮ ಕಷ್ಟಕ್ಕೆ ದೂರಾಗುವರು..
ದಾರಿ ಎಲ್ಲರೊಂದಿಗೆ‌ ಸಲೀಸಾಗಿ‌ ಹೋಗವಾಗ
ಬರುತ್ತಿರುತ್ತಾರೆ ಯಾರಾದರೂ ಮನದಲ್ಲಿ ಕಲ್ಮಷ ತುಂಬಲು..
ಸ್ವಂತ ಮನದ ಮಾತ ಕೇಳಿ ಮುನ್ನುಗುತಿರಲಿ
ಹಾಯಾಗಿರುವುದು ಮನವು ಎಂದೆಂದೂ..
ಮನದ‌‌ ನುಡಿತ ಬೇರೆಯವರ ಹಿತವಾಗಿರಲಿ..
ಎಲ್ಲರ ಒಳಿತು‌ ನಿಮ್ಮ ಮಾತಾಗಿರಲಿ...
@ಮೇಘ ಗಣೇಶ್

- Megha s

03 Sep 2020, 11:00 am
Download App from Playstore: