ಬೇಜಾರು

ಭ್ರಷ್ಟಾಚಾರಿ ಕಳ್ಳರನ್ನು
ನಾಯಕ ಜನ ನಾಯಕನೆಂದು
ಗೆಲ್ಲಿಸಿ ಆಳಲು ದೇಶ ರಾಜ್ಯ ಕೊಟ್ಟರೆ
ದೇಶ ಮಾರಾಟವಾಗದಿರುವುದೇ
ರಾಜ್ಯ ಲೂಟಿಯಾಗದಿರುವುದೇ
ಜನರೇ ಮಾಡಿಕೊಂಡ ತಪ್ಪಿಗೆ
ಶೀಕ್ಷೆ ಅನುಭವಿಸುವುದು ಒಂದೇ ಬಾಕಿ
ಭ್ರಷ್ಟಾ ಕಳ್ಳರ ಕೈಗೆ ರಾಜ್ಯ ಕೊಟ್ಟು
ರಾಜ್ಯ ಲೂಟಿಯಾಗಿದೆ ಎಂದು
ಬೀದಿಗೆ ಇಳಿದು ಹೋರಾಟ ಮಾಡಿದರೆ
ನಿವು ಆಗುವಿರಿ ಜೈಲು ಪಾಲು
ಮನೆಯವರಾಗುವರು ಬೀದಿ ಪಾಲು
ಎಚ್ಚರ ಎಚ್ಚರಿಕೆ ಇರಲಿ
ಮತ ಹಾಕುವ ಮುನ್ನ ನಿಮಗೆ

- ರಾಜು ಹಾಸನ

01 Oct 2020, 12:30 am
Download App from Playstore: