ಜಂಬವೇಕೆ

ನಾನು ನನ್ನದೆಂದು
ಕಿತ್ತಾಡಿ ಹೊಡೆದಾಡುವ ಜನ
ಮನೆ ಮೇಲೆ ಮನೆ ಕಟ್ಟಿ
ಹಣದ ಮೇಲೆ ಹಣ ಸಂಪಾದಿಸಿ
ಸಂಪತ್ತಿನ ಮೇಲೆ ಸಂಪತ್ತು
ಕೂಡಿಟ್ಟು ಬಚ್ಚಿಟ್ಟರೇನು ಬಂತು
ತಂದೆ ತಾಯಿ ಕೊಟ್ಟ ಜೀವ
ಪ್ರಾಣ ಭಿಕ್ಷೆಯಾಗಿರುವಾಗ
ಪ್ರಕೃತಿ ಕೊಟ್ಟ ಸಿರಿ ಸಂಪತ್ತು
ನಮ್ಮದಲ್ಲದಿರುವಾಗ ಜಂಬವೇಕೆ
ರೈತ ಬೆಳೆದ ಅನ್ನ ತಿಂದು ಬದುಕುವ
ನಾವು ನನ್ನದೆಂದು ನಮ್ಮದೆಂದು
ಹೇಳುವ ಗರ್ವವು ನಮಗಿಲ್ಲ
ಏನೇ ಆದರೂ ಏನೇ ಇದ್ದರೂ
ಮಣ್ಣಲ್ಲಿ ಮಣ್ಣಾಗಿ ಹೋಗುವುದನ್ನ
ಯಾರಿಂದಲೂ ತಪ್ಪಿಸಲಾಗದು

- ರಾಜು ಹಾಸನ

10 Oct 2020, 03:45 pm
Download App from Playstore: