ಜನ ಸೇವೆ

ಕಾಡಿ ಬೇಡಿ ಭಿಕ್ಷೆ ಬೇಡಿ
ಕೈ ಕಾಲು ಹಿಡಿದು
ಬರುವರು ಗುಲಾಮರು
ಜನರ ಸೇವೆಗೆಂದು
ಗೆದ್ದ ಮೇಲೆ
ಮಾಡಿಸಿಕೊಳ್ಳುವರು
ಜನರಿಂದಲೇ
ತಮ್ಮ ತಮ್ಮ ಸೇವೆ

ಜನರಿಗೆ ಕೊಡುವರು
ಸುಳ್ಳು ಆಶ್ವಾಸನೆ
ಬಗೆಹರಿಯದು ಸಮಸ್ಯೆ
ಬಾರದಿರುವುದು ಪರಿಹಾರ
ನಾವು ಕೊಡಬೇಕಾಗಿದೆ
ಏಟಿಗೆ ಏಟು ತಿರುಗೇಟು
ಇಲ್ಲದಿದ್ದರೆ ಗುಡಿಸಿ
ಗುಂಡಾಂತರ ಮಾಡಿ
ತಿಪ್ಪೆ ಸಾರಿಸಿ
ಪರಾರಿಯಾಗುವರು
ಮನೆಯ ಮುಂದೆ
ರಂಗೋಲಿ ಬಿಡಿಸಿ

- ರಾಜು ಹಾಸನ

12 Oct 2020, 05:06 pm
Download App from Playstore: