ಮಳೆಹನಿ
ಮೊದಲ ಮಳೆಯ ಹನಿಯ ಸ್ಪರ್ಶಕ್ಕೆ
ಇಳೆಯ ಜನರ ಮನ ಕಾಯ್ದಿದೆ
ಆಗಸದ ರವಿಯ ಬಿಸಿಲಿನಾಟಕೆ
ಭೂಮಿಯು ಬಾಯಿ ತೆರೆದಿದೆ
ಬಿಸಿಲ ರೌದ್ರವ ಸಹಿಸದೇ
ಜಗದ ಜಾನುವಾರು ಬಸವಳಿದಿದೆ.
ಕಾನನದಿ ಚೈತ್ರದ ಚಿಗುರು ಒಡಮೂಡಿದೆ
ಮರದ ಬೇರು ವರ್ಷದ ಧಾರೆಗೆ ಒಡಲಾಡಿದೆ.
ರೈತನ ಮನ ಮಳೆಯ ಹನಿಗೆ ಕಾಯ್ದಿದೆ
ನಿಸರ್ಗದಲ್ಲಿ ಮೌನದ ಮೆರವಣಿಗೆ ನಡೆದಿದೆ
ನಿಸರ್ಗದ ಮೌನ ವರ್ಷಧಾರೆಯ ನಿರೀಕ್ಷೆಯಲ್ಲಿದೆ.
ಆಗಸದಿ ವರ್ಷದಾರೆ ಹರಿದುಬರಲಿ
ಜಗದ ಮೌನಕೆ ಜನರ ಮನಕ್ಕೆ
ನಿಸರ್ಗದ ನೀರವತೆಗೆ ತಂಪು ತರಲಿ
ಸುಳಿವ ತಂಗಾಳಿಯು ಜನರ ಮನಕೆ ಹರುಷ ತರಲಿ.
ಮಹೇಶ್ ಶಿಕ್ಷಕರು
- MAHESH.हिन्दीशिक्षक
13 Oct 2020, 08:15 pm
Download App from Playstore: