@ಅಕ್ಷರದ ಆತಂಕ@
ಅಕ್ಷರ ಕಲಿಯಿತು ಜನ ಅಸಂಖ್ಯಾತದಲ್ಲಿ
ಸಾಕ್ಷರ ರಾಯಿತು ಸಾಗರದಲ್ಲಿ
ಸಾಧನೆ ಮಾಡಿತು ಸಾವಿರದಲ್ಲಿ.
ಸಾಧನೆ ಮಾಡುವ ಶರವೇಗದಲ್ಲಿ
ಸಾಹಸ ಮಾಡುವ ಸಡಗರದಲ್ಲಿ
ವೈಭವದ ಬದುಕು ನೀಗಿಸುವಲ್ಲಿ
ಸ್ವೇಚ್ಛೆಯ ಸಂಭ್ರಮದಲ್ಲಿ
ಮಾನವೀಯ ಮೌಲ್ಯ ಮರೆಯಾಯಿತು
ಮನುಷ್ಯನಲ್ಲಿ ಅನುದಿನದಿ.
ಅಕ್ಷರದಿಂದ ಅಕ್ಕರೆ ಸಿಗಲಿಲ್ಲ
ಹಣದಿಂದಲೇ ಆತ್ಮೀಯತೆ ಹರಿಯಲಿಲ್ಲ
ಅಂತಸ್ತು ಗಳಿಂದ ಅಂತಃಕರಣ ಬರಲಿಲ್ಲ
ಬಂಗಲೆಗಳಿಂದ ಬಾಂಧವ್ಯ ಬೆಸೆಯಲಿಲ್ಲ
ವೈಭೋಗದಲ್ಲಿ ವಾಸ್ತವತೆ ಕಾಣಲಿಲ್ಲ
ಅಕ್ಷರವು ಮನುಷ್ಯನಲ್ಲಿ ದ್ವೇಷ ವೈಷಮ್ಯ,
ವೈರುಧ್ಯಗಳನ್ನು ಸೃಷ್ಟಿಸಿತು,
ಮನುಷ್ಯನಲ್ಲಿ ಮಾನವೀಯತೆಯನ್ನು
ಕೊಂದಿತು ಆಧುನಿಕತೆಯ ದಿನಗಳಲ್ಲಿ.
✍️ ಮಹೇಶ್. ಶಿಕ್ಷಕರು
- MAHESH.हिन्दीशिक्षक
13 Oct 2020, 10:44 pm
Download App from Playstore: