ಅರಿವು

ದೇವರು ಇದ್ದಿದ್ದರೆ
ಯಾರು ಅಳುತ್ತಿರಲಿಲ್ಲ
ಸಾಯುತ್ತಿರಲಿಲ್ಲ
ಹಸಿವಿನಿಂದ ಬಳಲುತ್ತಿರಲಿಲ್ಲ
ರೋಗ ರುಜನೇ ಬಂದರು
ಹೋಗುತ್ತಿರಲಿಲ್ಲ ದವಾಖನೆಗೆ
ಅಲೆದಾಡುತ್ತಿರಲಿಲ್ಲ
ಕಾಡು ಮೇಡು ಬೆಟ್ಟಗುಡ್ಡ
ಸುತ್ತುತ್ತಿರಲಿಲ್ಲ ಆ ಕ್ಷೇತ್ರ
ಈ ಕ್ಷೇತ್ರ ಪುಣ್ಯ ಕ್ಷೇತ್ರ
ಯಾರು ಯಾರಿಗಾಗಿಯು
ಕಾಯುತ್ತಿರಲಿಲ್ಲ
ನಿಮಗಾಗಿ ನೀವೇ ಹೊರೆತು
ನಿಮಗಾಗಿ ದೇವರಲ್ಲ
ಮೂಢರ ಮುಂದೆ
ಕಿನ್ನರಿ ಬಾರಿಸುವುದು ಒಂದೇ
ಹುಚ್ಚರ ಜಾತ್ರೆಯಲ್ಲಿ
ತಮಟೆ ಬಾರಿಸಿ
ಸಂಭ್ರಮಾಚರಣೆ
ಮಾಡುವುದು ಒಂದೇ

- ರಾಜು ಹಾಸನ

19 Oct 2020, 01:58 pm
Download App from Playstore: