ಕನ್ನಡ

ಕಣ ಕಣದಲ್ಲೂ ಕನ್ನಡ

ದೇಶವ ಸುತ್ತುತ್ತಾ ,
ಘೋಷವ ಕೂಗುವೆ.
ಕನ್ನಡಕ್ಕಾಗಿ ಜನನ.
ಕನ್ನಡಕ್ಕಾಗಿ ಮರಣ,
ಭಾರತಾಂಬೆಯ
ಸೆರಗಿನಾಸರೆಯಲ್ಲಿ
ನಮ್ಮೆಲ್ಲರ ಜೀವನ.
ಕಾವೇರಿ ನೀರನ್ನು
ಸವಿದರೆ ನಮ್ಮಯ
ಜೀವನ ಪಾವನ.
ಕನ್ನಡ ತಾಯಿಗೆ
ದ್ರೋಹವ ಬಗೆದರೆ
ವೈರಿಗಳಿಗೆ ಸಿದ್ಧವಿದೆ
ನಮ್ಮ ರಾಮಬಾಣ
ಕ್ಷಣಮಾತ್ರದಲ್ಲಿ ಉರುಳಲಿ
ದ್ರೋಹಿಗಳ ಪ್ರಾಣ.
ನಾಡುನುಡಿಗೆಂದೆ ಬರೆದೆ
ನನ್ನ ಅಭಿಮಾನದ ಕವನ
ಕೇಳುಗರ ಕಿವಿಗಳಿಗಿಂಪು
ಬದುಕಾಗಲೀ ಪಾವನ
ಕನ್ನಡಾಂಬೆಯ ಪಾದಕ್ಕೆ
ಈ ಕೆಚ್ಚೆದೆಯ ಕನ್ನಡಿಗನ ನಮನ.
ಜೀತು

- ಸಂತೋಷ್//ಜೀತು

22 Oct 2020, 09:10 am
Download App from Playstore: