ಹಬ್ಬ

ಉಳ್ಳವರಿಗೆ
ದೀಪಗಳ ಹಬ್ಬ
ಬೆಳಕಿನ ಹಬ್ಬ
ಹರುಷದ ಹಬ್ಬ

ಬಡವರಿಗೆ
ಹಸಿವಿನ ಹಬ್ಬ
ಕತ್ತಲ ಹಬ್ಬ
ಕಣ್ಣೀರ ಹಬ್ಬ

ಹಬ್ಬ ಹರಿದಿನವೆಂದು
ಕುಣಿದು ಕುಪ್ಪಳಿಸಿ
ಮೋಜು ಮಸ್ತಿ
ಮಾಡುವ ಬದಲು
ಕಣ್ಣೀರ ಒರೆಸಿ
ಹಸಿದ ಹೊಟ್ಟೆಗೆ
ಅನ್ನ ಕೊಟ್ಟರೆ
ಬದುಕುಳಿಯುವುದು
ಬಡಪಾಯಿ ಜೀವಾ
ನಗು ನಗುತಾ ಬಾಳುವುದು
ನೊಂದು ಬೆಂದ ಜೀವಾ
ದೊರಕುವುದಯ್ಯ
ನಿನಗೆ ಮುಕುತಿ
ಬರುವುದಯ್ಯ ಪುಣ್ಯ
ಸಿಗುವುದಯ್ಯ
ಜನರ ಆಶಿರ್ವಾದ

ಹಬ್ಬ ಹರಿದಿನಗಳ
ಆಚರಣೆಯಿಂದ ಸಿಗುವ
ಖುಷಿ ಸಂತೋಷಕ್ಕಿಂತ
ಜನರ ಸೇವೆ ಮಾಡಿದಾಗ
ಸಿಗುವ ಖುಷಿ ನೆಮ್ಮದಿಯೇ
ನನಗೆ ಶ್ರೇಷ್ಠ ಮಿಗಿಲಯ್ಯ
*******ರಾಜು ಹಾಸನ*******

- ರಾಜು ಹಾಸನ

14 Nov 2020, 12:02 am
Download App from Playstore: