ಬಾಬಾಸಾಹೇಬರು

ಆಡು ಮುಟ್ಟದ ಸೊಪ್ಪಿಲ್ಲ
ಜನರು ಮುಟ್ಟದ ಅನ್ನವಿಲ್ಲ
ಗಾಳಿ ಮುಟ್ಟದ ಜಗತ್ತಿಲ್ಲ
ಪ್ರೀತಿ ಮುಟ್ಟದ ಮನವಿಲ್ಲ
ಸೂರ್ಯ ಚಂದ್ರರು
ಇಲ್ಲದ ಭೂಮಿ ಇಲ್ಲ
ಬಾಬಾಸಾಹೇಬರು
ಓದದೆ ಇರುವ ಪುಸ್ತಕವಿಲ್ಲ
ಬಾಬಾಸಾಹೇಬರು
ಇಲ್ಲದೆ ಸಂವಿಧಾನವಿಲ್ಲ
ಸಂವಿಧಾನವಿಲ್ಲದೆ
ಈ ದೇಶ ನಾವು ನಿವು
ಯಾರು ಇಲ್ಲ
ಯಾರೂ ಇರೋದು ಇಲ್ಲ

- ರಾಜು ಹಾಸನ

14 Nov 2020, 11:17 pm
Download App from Playstore: