ರಂಗ ಕಲಾವಿದ
ಹೊಸಬಣ್ಣ ಹಳೆ ರೂಪಗಳ ಹೊದ್ದು
ಸೂತ್ರಧಾರನು ಆಡಿಸುವ ನಾಟಕಗಳ
ಆಳ ಅಗಲಕ್ಕಿಳಿದು ಆಟವ ಆಡುವ
ರಂಗ ಕಲಾವಿದನೆ ನಿನಗೆ ಶರಣಯ್ಯ
ಬದುಕು ಕಟ್ಟಲು ಜಗವನು ನಗಿಸುವೆ
ಒಮ್ಮೊಮ್ಮೆ ಕಣ್ಣೀರ ಹರಿವಂತೆಯು
ಸುರ ಅಸುರರ ಪಾತ್ರಗಳ ನಿರ್ವಹಿಸಿ
ಬದುಕಿನಲಿ ನೈಜತೆಯ ಮೆರೆದಿರುವೆ
ಹುಟ್ಟು ಸಾವ ಗೆದ್ದು ಬಂದ ದೊರೆ
ಒಂದು ದೇಹದ ವಿವಿದ ಪಾತ್ರಧಾರಿ
ಆಳು ಅರಸ ನವರಸಗಳ ನಾಯಕ
ಅದೆಷ್ಟು ಹೊಗಳಿದರು ಕಡಿಮೆ ನಿನಗೆ
ಆದರೂ ಒಂದೋತ್ತಿನ ಊಟಕ್ಕಾಗಿ ಪರದಾಡಿ ಕಾಡಿ ಬೇಡಿ ಅಭಿನಯಿಸಿ
ಕೈ ಮುಗಿದು ಸಂಸಾರದ ತೇರೆಳೆದು
ಜೀವನದ ನೌಕೆಯನ್ನು ನುಕುತಿರುವೆ
ಕೋರೋಣ ಮಹಾಮಾರಿಯಿಂದಾಗಿ
ಕಂಗಾಲಾಗಿ ಜೀವನವ ಗಟ್ಟಿ ಮಾಡಿ
ಹೊಲ ಗದ್ದೆ ಗಳಲಿ ದುಡಿದು ಉಂಡ
ಸಾಕಾರ ಮೂರ್ತಿಯೇ ನಿನಗೆ ಶರಣು
ಕಲ್ಮೇಶ ಬಡಿಗೇರ
......... ಬದಾಮಿ......
- Kalmesh Badiger
06 Dec 2020, 04:46 pm
Download App from Playstore: