ರೈತ ದೇವರು
ರೈತ ರೈತ ರೈತರು
ದೇಶಕ್ಕೆ ಅನ್ನ
ಕೊಟ್ಟ ದೇವರು
ಎಲ್ಲಾ ಜನರ
ಹಸಿವು ನೀಗಿಸಿದ
ಅನ್ನದಾತರು
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ
ಬರಗಾಲ ಬಂದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಜಾತಿ ಧರ್ಮದ
ಭಿನ್ನ ಬೇಧ
ಭಾವವಿಲ್ಲದೆ
ಯಾರ ಹಂಗು
ಹೋಂಗಿಲ್ಲದೆ
ದುಡಿದು ದೇಶಕ್ಕೆ
ಅನ್ನವನಿಟ್ಟ ಒಡೆಯರು
ಬಂಗಾರದ
ಮನುಷ್ಯರು
ರೈತ ಬೆಳೆದ
ಬಗೆ ಬಗೆಯ
ಅನ್ನವ ತಿಂದು
ತಿರುಗಿ ಬೊಗಳುವ
ನಾಯಿ ನರಿಗಳು
ಹೆದರಿಕೆ ಬೆದರಿಕೆ
ಒಡ್ಡುವ ಕುನ್ನಿಗಳು
ಹಸಿದ ಹೊಟ್ಟೆಗೆ
ತಿನ್ನುವರೇ
ಮಣ್ಣು ಇಲ್ಲ
ಹಾದಿ ಬೀದಿಯಲ್ಲಿ
ಬಿದ್ದಿರುವ ಕಸವೋ
ನಿಂತು ನಿಲ್ಲದೆ
ಕುಂತು ಕುರದೆ
ಬಿಸಿಲು ಬೆಂಕಿ
ಎನ್ನದೇ ದುಡಿಯುವ
ರೈತರ ಕಷ್ಟ
ನೆರಳಲ್ಲಿ ಕುಂತು
ನಿಂತು ತಿನ್ನುವ
ಜನರಿಗೆನು ಗೊತ್ತು
ಭೂಮಿಗೆ
ಬಂದು ದುಡಿಯಲ್ಲಿ
ತಿಳಿಯುವುದು
ರೈತರ ಕಷ್ಟ
ರೈತರ ಗತ್ತು
ಗಮ್ಮತ್ತು ತಾಕತ್ತು
ಇಡೀ ಜಗತ್ತಿಗೆ ಗೊತ್ತು
- ರಾಜು ಹಾಸನ
08 Dec 2020, 09:26 pm
Download App from Playstore: