ಶ್ರಮದ ಪಾಲು

ನೆರಳಲ್ಲಿ ಕುಳಿತು
ಘಂಟೆ ಜಾಗಟೆ ಬಾರಿಸಿ
ಜನರ ಹಣೆಗೆ
ಪಂಗನಾಮ ಹಾಕಿ
ಪುಂಗಿ ಊದುವ
ಪುಂಗಿ ದಾಸ
ಪೂಜಾರಿಗೆ
ಕೂಡುವರಯ್ಯಾ
ದಿನದ ದಕ್ಷಿಣೆ
ತಿಂಗಳ ಸಂಬಳ
ಹೊತ್ತು ಗೊತ್ತಿಲ್ಲದೆ
ದಿನನಿತ್ಯ ದುಡಿಯುವ
ರೈತನಿಗಿಲ್ಲಾ
ಒಂದು ಹೊತ್ತಿನ
ಊಟದ ಸಂಬಳ
ದಿನ ನಿತ್ಯದ
ಕೂಲಿ ಸಂಬಳ
ತಿಂಗಳ ಸಂಬಳ

ಅಂತೂ ಇಂತೂ
ವರ್ಷಕೊಮ್ಮೆ
ಕೊಡುವರಯ್ಯಾ
ಬರ ಪರಿಹಾರ
ಬೆಳೆ ಪರಿಹಾರ
ಅದರಲ್ಲು ಸಣ್ಣ
ಪುಟ್ಟ ದೊಡ್ಡ
ತಿಮಿಂಗಿಲ ನೀಲಿ
ತಿಮಿಂಗಿಲಗಳು
ತಿಂದು ಮಿಕ್ಕಿದ
ಅಳಿದು ಉಳಿದ
ಚಿಲ್ಲರೆ ಕಾಸು
ಬಂದರು ಆಯ್ತು
ಹೋದರು ಆಯ್ತು
ಕಂಡವರ ಕೈ
ಪಾಲಾದರು ಆಯ್ತು
ತಿಂದವನ ಬಾಯಿ
ಪಾಲಾದರು ಆಯ್ತು
ಕೊನೆಗು ಸಿಗಲಿಲ್ಲ
ರೈತನ ಶ್ರಮದ ಪಾಲು

- ರಾಜು ಹಾಸನ

09 Dec 2020, 02:50 pm
Download App from Playstore: