ಮರೆಯ ಬೇಡ

ನೀ ಎಷ್ಟೇ
ಎತ್ತರಕ್ಕೆ ಬೆಳೆದರು
ಲಕ್ಷಧಿಪತಿ
ಕೋಟ್ಯಾಧಿಪತಿಯಾದರೂ
ತಮ್ಮ ಜೀವವನ್ನೇ
ತೊಯ್ದು ಬದುಕನ್ನೇ
ಮುಡಿಪಾಗಿಟ್ಟು
ಜೀವಾ ಜೀವನದ
ಭಿಕ್ಷೆ ಕೊಟ್ಟ
ಬಾಬಾ ಸಾಹೇಬರ ಮರೆತು
ನೀ ಭೀಗಾ ಬೇಡ
ನಿನ್ನ ಬದುಕು ಬಾಳು
ನಿಂತಿರುವುದು
ಸಂವಿಧಾನದ ಸೂರಿನಡಿ
ಸಂವಿಧಾನವೇ ಕುಸಿದರೆ
ನಿನ್ನ ಬದುಕು ಕುಸಿದು
ಅಲ್ಲೋಲ
ಕಲ್ಲೋಲವಾಗುವುದು
ತಿಳಿಯೋ ಬಾಳು
ಓ ಮನುಜ ವಿಶ್ವ ಮನುಜ

- ರಾಜು ಹಾಸನ

10 Dec 2020, 06:28 pm
Download App from Playstore: