ನನ್ನ ಒಡೆಯ

ತಂದೆ ತಾಯಿಗೆ
ಅನ್ನ ಕೊಡದ ಮಕ್ಕಳು
ಜನರ ಕಷ್ಟ
ಆಲಿಸಿದ ನಾಯಕರು
ಇದ್ದರೂ ಒಂದೇ
ಮಣ್ಣಲ್ಲಿ ಮಣ್ಣಾದರು ಒಂದೇ

ಇದ್ದಷ್ಟು ದಿನ ಇರಬೇಕು
ಎಲ್ಲಾರು ಒಂದೇ ಎಂದು
ಇಲ್ಲದಿದ್ದರೆ ಸತ್ತು
ಸಮಾಧಿಯಾಗಬೇಕು
ಮಸಣದ ಹೆಣವಾಗಿ
ಹಾಗೆ ಸುಮ್ಮನೆ

ಜಾತಿ ಧರ್ಮದ
ನಾಲ್ಕು ಗೋಡೆಗಳ
ಮಧ್ಯೆ ನಿಂತು
ನೀ ನಿನ್ನ ಸಮಾಜ
ಜನ ಸಮುದಾಯದ
ನಾಲ್ಕೇ ನಾಲ್ಕು ಜನರಿಗೆ
ನೀ ನಾಯಕನಾದರು
ಇಡೀ ದೇಶ ವಿಶ್ವಕ್ಕೆ
ಎಲ್ಲಾ ಸಮಾಜದ
ಜನ ಸಮುದಾಯದ
ನಾಯಕ ಮಹಾನಾಯಕ
ನನ್ನ ಒಡೆಯ ಭೀಮರಾವ್

- ರಾಜು ಹಾಸನ

13 Dec 2020, 11:51 pm
Download App from Playstore: