ನಿಜಾಂಶ
ಸಂಸಾರದ ಗಾಳಿ
ಗಂಧವೇ ತಿಳಿಯದ
ಬಡತನದ ಕಷ್ಟ ಅರಿಯದ
ರೈತರ ಗೋಳು ಕೇಳದ
ಸಮಾಜಕ್ಕೆ ಉತ್ತಮ
ಸಂದೇಶ ಕೊಡುಗೆ ಕೊಡದ
ದ್ವೇಷ ಅಸೂಯೆಯ
ಬೇಧ ಭಾವದ ಬೆಂಕಿ ಹಚ್ಚಿ
ಸಮಾಜವನ್ನೇ ಕಿತ್ತು
ತಿನ್ನುವ ಗುಲಾಮರು
ತಮ್ಮ ತಮ್ಮ ಕಳ್ಳ
ಖಜಾನೆಯ ತುಂಬಿಸಿಕೊಂಡು
ತಮ್ಮ ತಮ್ಮವರ ಏಳಿಗೆಗಾಗಿ
ಪರರ ಅಪರಾಧಿ ಮಾಡುವ
ರಣ ಹದ್ದು ನಾಲಾಯಕ್
ಸ್ವಾರ್ಥದ ಜನ ನಾಯಕರು
ದೇಶದ ಜನರ ಕಷ್ಟ ಸುಖ
ನೋವು ನಲಿವು ಏಳು
ಬೀಳು ತಿಳಿಯಲು ಸಾಧ್ಯವೇ
ಎಲ್ಲಾ ಜನ ಸಮುದಾಯದ
ಏಳಿಗೆ ಬಯಸುವರೇ
ಸಹಿಸಿ ಬಾಳುವರೇ.....?
********ರಾಜು ಹಾಸನ*********
- ರಾಜು ಹಾಸನ
16 Dec 2020, 11:47 pm
Download App from Playstore: