ಭೀಮ್ ರಾವ್

ಜ್ಞಾನದ ಬೆಳಕು ಚೆಲ್ಲಿ
ಛಲದ ಬಲ ತುಂಬಿ
ಶಿಕ್ಷಣ ಸಂಘಟನೆ ಕಟ್ಟಿ
ಹೋರಾಟ ಚಳುವಳಿ ನಡೆಸಿ
ಮನುವಾದಿಗಳ ಸಂಹಾರಕ್ಕೆ
ದಿನ ದಲಿತರ ಏಳಿಗೆಗೆ
ಸ್ತ್ರೀ ಶೋಷಿತರ ರಕ್ಷಣೆ
ಸಂರಕ್ಷಣೆಗೆ ಪ್ರಾಣ ಒತ್ತೆ ಇಟ್ಟು
ಜೀವನವನ್ನೇ ಮುಡಿಪಾಗಿಟ್ಟು
ಹೋರಾಡಿದ ಛಲವಾದಿ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್

ಸಂವಿಧಾನವೇ ನನ್ನ ಶಕ್ತಿಯು
ನ್ಯಾಯ ನೀತಿಯೇ ನನ್ನ ಜೀವನ
ಬಾಬಾ ಸಾಹೇಬರೇ ನನ್ನ ಜೀವವೂ
ಸಿಡಿಲು ಗುಡುಗು ಭೀಮ ಘರ್ಜನೆ
ಬದುಕು ಬಾಳಿನಲ್ಲಿ ಬೇರೆತು ಹೋದ
ಜೀವಾ ಭಾವದಲ್ಲಿ ಕೂಡಿ ಹೋದ
ಜಗದ್ ಜ್ಯೋತಿಯೇ ನಿಮಗೆ ಶರಣು
ದಲಿತ ಸೂರ್ಯ ಮಹಾನಾಯಕ
ಬಾಬಾ ಸಾಹೇಬರೇ
ನಿಮಗೆ ಋಣಿ ಕೋಟಿ ನಮನ

ಮನುವಾದಿಗಳ ಮುಖವಾಡ ಕಳಚಿ
ಪುಸ್ತಕ ಲೇಖನಿ ಖಡ್ಗ ಹಿಡಿದು
ದುಷ್ಟರ ರುಂಡ ಮುಂಡ ಚೆಂಡಾಡಿ
ಸಮಾನತೆಯ ಬೆಳಕು ಚೆಲ್ಲಿ
ಮನುವಾದಿಗಳೇ ಮುಗಿಬಿಳಲಿ
ದುಷ್ಟ ಜನರೇ ಅಡ್ಡಿ ಬಂದರೂ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್

- ರಾಜು ಹಾಸನ

21 Dec 2020, 10:42 am
Download App from Playstore: