ಉತ್ತುಂಗ
ಓದು ಬರಹ ಕಲಿತು
ಮನುವಾದಿಗಳ
ಗುಲಾಮನಾಗಬೇಡ
ಸ್ವಾಭಿಮಾನದ
ಕೂಡಿಯಾಗು
ಮೂಢನಂಬಿಕೆಯ
ಕಪಟ ಸೂತ್ರ
ತಿಳಿದು ತಿಳಿದು
ಕಂಡು ಕಂಡು
ಬೀಳಬೇಡ
ಹಗಲು ಕಂಡ ಬಾವಿಗೆ
ಶಾಶ್ವತವಲ್ಲದ ಕ್ಷಣಿಕವಾದ
ಮನುವಾದಿಗಳ
ಆಸೆ ಆಮಿಷಗಳಿಗೆ
ಜೋತು ಬಿದ್ದು
ಬಿಕ್ಷಕನಾಗಬೇಡ
ಜೊಲ್ಲು ಸುರಿಸಿ
ಸತ್ತು ಸಮಾಧಿಯಾಗಬೇಡ
ಸಂವಿಧಾನವಾ ಅರಿತು
ದಿಟ್ಟ ಹೆಜ್ಜೆ ಇಟ್ಟು
ನಡೆ ನಡೆ ನಿನ್ನ
ಬದುಕು ಬಾಳಿನ ಕಡೆ
ಗುರಿ ಸಾಧನೆಯ
ಉತ್ತುಂಗದ ಕಡೆ ಕಡೆ
*******ರಾಜು ಹಾಸನ*******
- ರಾಜು ಹಾಸನ
23 Dec 2020, 02:49 pm
Download App from Playstore: