ಆಚಾರ ವಿಚಾರ
ಬಡತನಕ್ಕೆ ಮೂಲ ಕಾರಣ
ಮೂಢನಂಬಿಕೆ ಆಚಾರ
ಆಚಾರ ದಿಕ್ಕರಿಸಿ
ವಿಚಾರ ಸ್ವೀಕರಿಸಿ
ಆಚಾರಕ್ಕೆಇಲ್ಲದಿರಲಿ
ನೆಲೆ ಬೆಲೆ ಮೂಲ ಬೆಲೆ
ವಿಚಾರಕ್ಕೆ ಸಿಗಲಿ
ನೆಲೆ ಬೆಲೆ ಒಳ್ಳೆ ಬೆಲೆ
ಆಚಾರಗಳು ಇದ್ದರು
ಇರಲಿ ಸೀಮಿತವಾಗಿರಲಿ
ನಿಮ್ಮ ಮನೆ ಮಂದಿರ
ಹಟ್ಟಿಯ ಒಳಗಿರಲಿ
ವಿಚಾರಗಳು ಹುಟ್ಟಿ
ಬರಲಿ ಬಯಲಿಗೆ
ಊರು ಕೇರಿ ಜಗದ
ತುಂಬೆಲ್ಲ ಹರಡಲಿ
ಜನರ ಏಳಿಗೆ ಬಯಸುವ
ದೇಶಕ್ಕೆ ಬೇಕು ವಿಚಾರವೇ
ಹೊರೆತು ಆಚಾರವಲ್ಲಾ
ಆಚಾರ ಹಣೆಗೆ ಅಂಟಿಸಿಕೊಂಡ
ಮೂಢನಂಬಿಕೆ ಮೈ ತುಂಬಿಕೊಂಡ
ದೇಶದ ಏಳಿಗೆ ಕುಂಠಿತ ಕುಂಠಿತ
ಹಾಗಾಗಿ ಆಧರಿಸಬೇಕು
ಸ್ವೀಕರಿಸಬೇಕು ಸಂವಿಧಾನದ ವಿಚಾರ
ಬಿಟ್ಟುಬಿಡಬೇಕು ತಿರಸ್ಕರಿಸಬೇಕು
ದಿಕ್ಕರಿಸಬೇಕು ಮೂಢನಂಬಿಕೆ ಆಚಾರ
- ರಾಜು ಹಾಸನ
14 Jan 2021, 09:58 am
Download App from Playstore: