ಬದಲಾಗುತ್ತದೆ ಜನ ಮನ,

ಕಾಲ ನಿಯಮ



ಬದಲಾಗುತ್ತದೆ ಜನ ಮನ,ಜಗತ್ತಲ್ಲ ನಡೆದು ಬಂದ ಹೆಜ್ಜೆಗಳು ಮಾಸಿವೆ,ಪಾದಗಳು ಹೊಸ ಉರುಪಿನಿಂದ ಬಹುದೂರ ಸಾಗಿವೆ.

ಈಗ ಮಾಸಲು ನೆನಪುಗಳಷ್ಟೇ ಓಡುತ್ತಿರುವ ಯೋಚನೆ ವಿವೇಚನೆ ಒಂದೊಂದೇ ಹೆಜ್ಜೆ ದೂರವಾಗುತ್ತಿವೆ, ಕೈ ಚಾಚಿ ಕರೆದೊಯ್ಯಲು ಮನಸ್ಸಿಲ್ಲ,ಸದಾ ಮನಸಲ್ಲೇ ಇದ್ದೀರಿ ಅನ್ನುತ್ತಿದೆ ಜನವೆಲ್ಲಾ.

ಹೂ ಅರಳಿದಾಗ ಇದ್ದ ಮೊಬತ್,ಈಗ ಬರವಣಿಗೆಯಲ್ಲಿ ಮೂಡಿ ಬರುತ್ತಿದೆ ಹಂತ ಹಂತವಾಗಿ ಖಾಸಾ ಬಾತ್,ಉಪ್ಪು ಹುಳಿಯಿರದ ಸಪ್ಪೆ ಊಟದಂತೆ,ಕಾಡುತ್ತಿವೆ ಹಲವಾರು ಚಿಂತೆ.

ಓದಲಷ್ಟೇ ಚೆಂದ ಪ್ರೇಮ ಕಹಾನಿ,ನಾವೇ ಅದರ ಪಾತ್ರಗಳೆಂದು ಗೊತ್ತಾದಾಗ ಆಗುತ್ತಿದ್ದೇವೆ ಮೌನಿ,ಕಾರಣ ಪ್ರೇಮ ಮೂರ್ತಿ ಮಸಕು ಮಸುಕಾಗಿ ಕಾಣುತ್ತಿದೆ ದೂರ ಸಾಗಿ ಬಂದ ನಮಗೆ.

ಈಗಷ್ಟೇ ಬಂದ ಸುದ್ಧಿ ಹಲವಾರೋಗಗಳಿಗೆ ತುತ್ತಾಗಿದ್ದಾನೆ ಪಾಗಲ್ ಪ್ರೇಮಿ, ಪರೀಕ್ಷಿಸಲು ರಕ್ತವೆ ಇರದ ಅನಾಮಿ,ಬಸಿದು ಬರೆದ ರಕ್ತದ ಪ್ರೇಮ ಪಾತ್ರಗಳೇ ಇವನ್ನೆಬ್ಬಿಸಿದ ಸುನಾಮಿ.

ಮತ್ತದೇ ನೆಲ ಹಲವು ಹೃದಯಗಳಿಗೆ ಜನನ, ಅರಳಿ ನರಳುವವು ಎಷ್ಟೋ,ನಗುವವು ಎಷ್ಟೋ ಲೆಕ್ಕವಿಡಲಾಗದ ನೆಲದವ್ವ ಮತ್ತೆ ಮೌನಿ, ಮರಳಲ್ಲಿ ಮರೆಯಾದ ಹೆಜ್ಜೆ ಗುರುತುಗಳಂತೆ.

- ನಂದು

01 Mar 2021, 04:19 pm
Download App from Playstore: