ಮಭಕ್ತಿಯಲ್ಲ
ಬದುಕಿದ್ದಾಗ ತಂದೆ ತಾಯಿಗೆ
ಒಂದು ಬೊಗಸೆ ನೀರು
ಒಂದು ಹಿಡಿ ಅನ್ನ ಕೊಡದೆ
ಗುಡಿಯ ಮುಂದೆ
ನಿಂತು ಕುಂತು ಬೆಡಿದರೆ
ಸಿಗುವುದೇ ಮೂಢ ನಿನಗೆ ಮುಕ್ತಿ
ನಿನ್ನ ಹಸಿದ ಒಡಲಿಗೆ
ಹಾಲೆರೆದ ಬೆಳೆಸಿ ಸಲಹಿದ
ತಂದೆ ತಾಯಿಯ ಒಡಲಿಗೆ
ಹಸಿವಿನ ವಿಷವನ್ನು ಉಣಬಡಿಸಿ
ದೇವರೆಂದು ಕಲ್ಲು ಗೊಂಬೆಗೆ
ರಾಶಿ ರಾಶಿ ಹಾಲು ಸುರಿದರೆ
ಫಲಿಸುವುದೇ ಓ ಮೂಢ ನಿನಗೆ
ಬಂಗಾರದ ಬಾಳು
ಮೂಢ ಜನಗಳು
ಓ ಮೂಢ ಜನಗಳೇ
ಮುಕ್ತಿ ಎಂಬುದು
ಕಾಯಕದ ಭಕುತಿಯೇ ಹೊರೆತು
ಮೂಢನಂಬಿಕೆಯ ಮಂತ್ರಚಾರಣೆಯ
ಅಂಧಕಾರದ ಮಭಕ್ತಿಯಲ್ಲ
ತಂದೆ ತಾಯಿಯ ಸೇವೆಯೇ ದೇವರು ಸೇವೆ
ತಿಳಿಯೋ ಮಂಕುತಿಮ್ಮ
*********ರಾಜು ಹಾಸನ**********
- ರಾಜು ಹಾಸನ
09 Mar 2021, 12:06 am
Download App from Playstore: