ಬೆಳೆಯುವ ಸಿರಿ ಮೊಳಕೆಯಲ್ಲೆ ನಾಶ
ಚಿಕ್ಕಂದಿನಲ್ಲೇ ಆದ ಮದುವೆ
ಆಗಲೇ ಬಂದಿದ್ದ ಪಟ್ಟ ವಿಧವೆ
ತೃಣ ಕಾಲ ಮಾತ್ರ ಸಂತಸ
ಇನ್ನು ಬಾಳಲ್ಲಿ ಬರೀ ವಿರಸ ........
ನೋವಿನಿಂದ ಬಳಲಿದ ಮನಸು
ಕಣ್ಣಲ್ಲಿಲ್ಲ ಬೇರೆ ಯಾವುದೇ ಕನಸು
ಈಗಾಗಲೇ ಬಳಲಿತ್ತು ಹೃದಯ
ಜೀವಕ್ಕಾಗಲೆ ಹೇಳುವ ಸ್ಥಿತಿಯಲ್ಲಿತ್ತು ವಿದಾಯ .......
ಜಗತ್ತಿನಲ್ಲಿಗ ಬದುಕುವುದು ಕಷ್ಟ
ಈಗಾಗಲೇ ಬಂದಿತ್ತು ವಿಧವೆ ಪಟ್ಟ
ನೋವು-ಅವಮಾನಗಳು ಕಾರ್ಮೋಡ
ಈ ಬಾಳಲ್ಲಿ ಬರೀ ದುಗುಡ .......
ಕುಸಿಯಿತೀಗ ಜೀವನದ ಬುನಾದಿ
ಇನ್ನೆಲ್ಲಿ ಜೀವನಕ್ಕೆ ಹಾದಿ
ಮನ ಪ್ರೀತಿ ಕಾಣಲಿಲ್ಲ
ಮತ್ತೆ ಮನಸ್ಸು ಅರಳಲೆ ಇಲ್ಲ........
-ಮಧು❤️ಮಧು
- madhu
19 May 2021, 10:51 am
Download App from Playstore: