ಕೊರೋನಾ
ಕರುಣೆ ಇಲ್ಲದ ಕೊರೋನಾ
ಮಮತೆ ಇಲ್ಲದ ಮರಣ ಮುಗಿದಾಯಿತು ಕೊರೋನಾದ ಮೊದಲ ಅಲೆ
ಶುರುವಾಯಿತು ಕೊರೋನಾದ ಎರಡನೇ ಅಲೆ
ಬಂದರೆ ಮೂರನೇ ಅಲೆ
ನಮಗಿಲ್ಲ ಇಲ್ಲಿ ನೆಲೆ
ಬೀಸುತಿದೆ ಸಾವಿನ ಬಲೆ
ವಿಸ್ತರಿಸುತಿದೆ ಭಯದ ಅಲೆ
ಎಲ್ಲೆಂದರಲ್ಲಿ ಸಾವು ನೋವು
ಮರೆಯಾಗುತಿದೆ ನಗು ನಲಿವು
ಯಾರೋ ಮಾಡಿದ ತಪ್ಪಿಗೆ
ಇನ್ಯಾರೋ ಏರುತಿರುವರು ಸಿದಿಗೆ
ಕೇಳಲಾಗುತ್ತಿಲ್ಲ ಸಾವಿನ ಸುದ್ದಿ
ಜನ ಕಲಿಯುತ್ತಿಲ್ಲ ಬುದ್ದಿ
ಮತ್ತೆ ಜನತೆಯ ಓಡಾಟ
ಸಾವಿನೊಂದಿಗಿನ ಹುಡುಗಾಟ
ಬೇಡ ವಿನಾಕಾರಣ ಜನ ಸಂಚಾರ
ಸಿಗುತ್ತಿಲ್ಲ ಸರಿಯಾದ ಉಪಚಾರ
ಸಾವಿಗೆ ಸಾವಿರಾರು ನೆಪಗಳು
ಕೊರೋನಾಗೆ ನೂರೆಂಟು ರೂಪಗಳು
ಕೊರೋನಾಗೆ ಸಣ್ಣವರೂ ಸಾಕಾಗುತ್ತಿಲ್ಲ
ದೊಡ್ಡವರೂ ಸಾಕಾಗುತ್ತಿಲ್ಲ
ಹಿರಿಯರಿರಲಿ ಕಿರಿಯರಿರಲಿ
ಎಲ್ಲರು ಮನೆಯಲ್ಲೇ ಇರಲಿ
ಮನೆಯೇ ಮಂತ್ರಾಲಯ
ಮನೆಯೇ ಅಲ್ಲವೇ ಔಷಧಾಲಯ
ಗುರು ಮುನಿದರೆ ಹರ ಕಾಯ್ವನು
ಹರ ಮುನಿದರೆ ಯಾವನು ಕಾಯ್ವನು
ಮಾನವ ಜನ್ಮ ದೊಡ್ಡದು
ಅದನು ಹಾಳು ಮಾಡಿಕೊಳ್ಳೋದು ದೊಡ್ಡ ತಪ್ಪದು
ಅರ್ಥ ಮಾಡಿಕೊಂಡರೆ ಚೆಂದಾದ ಬದುಕು
ಇಲ್ಲವಾದರೆ ಕ್ಷಮೆ ಇಲ್ಲ ಯಾವುದಕ್ಕು
ರಚನೆ-
ಮಗು ಪಾಟೀಲ
ಕವಿಗಳು,ರಾಯಬಾಗ
೩೦.೦೫.೨೦೨೧
- Mahaveer G Patil
30 May 2021, 02:03 pm
Download App from Playstore: