ಚಿಂತೆ ಏಕೆ
ಎಲ್ಲೆಯನ್ನು ಮೀರಿ "ಅಲ್ಲ"ನೇನಿಸಿಕೋಳುವುದೇಕೆ
ಇಲ್ಲ ಎನ್ನುವ ಚಿಂತೆಲಿ "ಗೊಲ್ಲ"ನಾಗುವೆಯಾಕೆ?
ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ಮಣ್ಣಗಿದಾನೆ
ಲೋಕವನ್ನೇ ಹೆದರಿಸಿದ ಲಾಡೆನ್ ಕರಕಲಾಗಿದನೆ
ಖಂಡವನ್ನೇ ದಂಡೆತ್ತಿದ ಖಿಲ್ಜಿ ಸೋತು ಸುಣ್ಣವಾದ
ಜಗತ್ತನ್ನೇ ನಿಬ್ಬೆರಗಾಗಿಸಿದ ಹಿಟ್ಲರ್ ನೇಣಿಗೇರಿದ
ಹಸಿರಿನಿಂದ ಕಂಗೊಳಿಸುವ ಎಲೆಗಳು ಒಣಗ್ತವೆ
ನುಣ್ಣಗೆ ಬಾಚಿದ ಕೂದಲುಗಳು ಉದರತವೆ
ಆಡಂಬರಡಿ ಮೆರೆದವ ಆಸ್ಪತ್ರೆ ಸೇರ್ತಿದಾನೆ
ಮೈಮಾಟದಿ ರಂಬೆಯಾದವಳೂ ಕನ್ನಡಿ ಹಿಡಿತಾಳೆ
ಧಮ್ ಇದೆ ಎಂದವನು ಟೊಳ್ಳು ಬಂಬ್ ಆಗ್ತಿದ್ದಾನೆ
ತಾಕತ್ ತೊಳಲ್ಲಿದೆ ಅಂದವನು ಹುಂಬ ಆಗ್ತಿದ್ದಾನೆ
ನೋಡಿಕೊಳ್ತಿನಿ ನಿಂನೆಂದವನು ಸುಂದ ಆಗ್ತಿದಾನೆ
ಸಿಗ್ತಿಯಾ ನೀನು ಎಂದವನು ಚೊಂಬು ಆಗ್ತಿದಾನೆ
ಅಕ್ಕರೆಯ ಮಾತಿನಲ್ಲಿ ಸಕ್ಕರೆಯ ಕೊಟ್ಟು
ಅಕ್ಕ-ಪಕ್ಕದವರನು ಬಿಕ್ಕದಂತೆ ಇಟ್ಟು
ನೆತ್ತಿಯ ಕೊಂಬನು ಬಿಂಬದಿ ಹೊತ್ತಿ
ಬಿದ್ದೋಗುವ ಮುನ್ನ ಇದ್ದನೆಂದಿನಿಸಿಕೊ!!!
ಸುಗ್ಗಿ..
- ಆರ್ ಎಸ್ ಸುಗ್ಗಿ.
27 Jun 2021, 09:54 pm
Download App from Playstore: