ಮೌನಿ
ಕೇಳಿದ್ದೊಂದು ಕರುನಾಡು
ಕಾಣುತಿಹುದೊಂದು ಸುಡುಗಾಡು.....
ಇದೆಂಥ ವಿಪರ್ಯಾಸ,
ಹೇಳಲೂ ಕೂಡಾ ಪ್ರಯಾಸ,
ಮಣ್ಣಾಗಿಸಿದರು ಮತ ನೀಡುವಾಗ ಕಾಣಿಸಿದ್ದ ಕನಸ........
ಬದಲಾದ ಧ್ಯೇಯ
ಇವರಲ್ಲ ವಿಧೇಯ
ಅಪಹಾಸ್ಯದಲ್ಲಿದೆ ರಾಜಕೀಯ....
ನಾಲ್ಕು ಜನಕಾದರೂ ಉಪಕಾರಿ ಎಮ್ಮೆಗಳು
ಮತ ಹಾಕಿದ ಜನಕಾದರು ಮಾರಿ ಈ ಎಮ್ಮೆಲ್ಲೆಗಳು......
ಮಾತಲ್ಲೇ ಮುಗಿಯಿತು ದೇಶೋದ್ಧಾರ
ಇವರಿಗೆ ಸೀಟು ಸಿಗುವುದೇ ಹರ್ಷೋದ್ಘಾರ.......
ಹೊಲಸು ತಿನ್ನುವ ಎಮ್ಮೆ ಕೊಡುವವು ಹಾಲ
ಹೊಲಸು ಎಮ್ಮೆಲ್ಲೆಗಳಿಂದ ಕೋಲಾಹಲ......
ಕಳೆದು ಹೋಗಿದೆ ಪ್ರಜಾಪ್ರಭುತ್ವ
ಇದಕೆ ಕಾರಣ ಅಂದೇ ಹೇಳಿದ ಪ್ರಜೆಗಳ ನೋಟಿಗೆ ಓಟೆಂಬ ತತ್ವ............
-ಮೌನಿ
- Naresh Poojari
15 Jul 2021, 11:44 am
Download App from Playstore: