ಪಯಣದ ಹಾದಿ
ಯಾರನ್ನೂ ನಂಬಿಯೂ
ನೆಡೆಯಬೇಡ ನುಡಿಯಬೇಡ
ಹೋಗಬೇಡ ಕೂರಬೇಡ
ಜೀವನ ಜೀವಂತವಾಗಿರುವಾಗ
ನಿಲ್ಲದೆ ನಿರಂತರವಾಗಿರುವಾಗ
ಜೀವ ಬಿಟ್ಟು ಹೋಗಬೇಡ
ಮನಸಿನ ಚಿಂತೆಯನ್ನು
ಛಲದ ಚಿತೆಯಲ್ಲಿಟ್ಟು
ಜ್ಞಾನದ ಬೆಳಕು ಹಚ್ಚಿ
ಗುರಿ ಮುಟ್ಟುವ ತನಕ
ಸಾಗಲಿ ಸಾಗಲಿ ಮುಂದೆ
ಮುಂದೆ ಸಾಗಿ ನೆಡೆಯಲಿ
ಪಯಣದ ಹಾದಿ
- ರಾಜು ಹಾಸನ
27 Jul 2021, 12:05 am
Download App from Playstore: