ಚಿತ್ತ ವಿಕಾಸದತ್ತ
ರಾಷ್ಟ್ರದ ವಿಕಾಸಕ್ಕೆ
ಜಾತಿ ಮತ ಪಂಥಗಳ ಅಡ್ಡಿಯಾಗಬಾರದು
ದೇಶದ ಏಳ್ಗೆಗೆ ಪರಕೀಯರ ಆಶ್ರಯ ಬಯಸದೆ
ಸ್ವದೇಶದ ಶಕ್ತಿಯಲ್ಲಿ ಬೆಳೆಯಬೇಕು
ಸಾಹಿತ್ಯ-ಸಂಸ್ಕೃತಿ ಜ್ಞಾನ ವಿಜ್ಞಾನಗಳ ಕ್ಷೇತ್ರಗಳಲ್ಲಿ
ಎತ್ತರವಾಗಿ ಬೆಳೆದು ಬದುಕಬೇಕು
ಈ ತೊಗಲಿನ ದೇಹಕ್ಕೆ
ಮೂರು ದಿನದ ಸಂತೆಯಲ್ಲಿ
ನೂರು ಚಿಂತೆ ಮಾಡಿ ಸಾಯುವುದೇಕೆ
ಹುಟ್ಟಿನಿಂದ ಸಾಯುವವರೆಗೂ
ಪ್ರತಿಯೊಬ್ಬ ಭಾರತೀಯನ
ಜೀವನ ಪುಟದಲ್ಲಿ
ಒಂದಿಲ್ಲ ಒಂದು ಇತಿಹಾಸ
ಬರೆದಿಡುವಂತಾಗಬೇಕು
ಎದ್ದೆಳೀ ನವ ಯುವಕರೆ
ಭಾರತಾಂಬೆಯ ಕರೆ ಇದು
ಯಾರಿಗೂ ಬಗ್ಗದೆ ಯಾರಿಗೂ ಕುಗ್ಗದೆ
ಸಾಧನೆಯ ಚಿತ್ತ ನಿಮಗಿರಲಿ
ರಕ್ತದ ಕಣ ಕಣದಲ್ಲಿ
ರಾಷ್ಟ್ರಪ್ರೇಮ ತುಂಬಿರಲಿ
ಭಾರತ ಮಾತೆಯ ಕೀರ್ತಿ ಧ್ವಜವು
ಮುಗಿಲೆತ್ತರಕ್ಕೆ ಹಾರುತ್ತಿರಲಿ
- shankar gargi
17 Aug 2021, 12:21 pm
Download App from Playstore: