ಕವನ ಅವಿಶ್ರಾಂತ ದುಡಿಮೆ
ಮನದಂಗಳದಿ ನೀವು ಪಡೆದು ಪೂಜಿಸಿದ ವೃತ್ತಿ,
ಸದಾ ಬಯಸುವುದು ನಿಮ್ಮಿಂದ ಕಲ್ಯಾಣ ಕಾರ್ಯಗಳ ಪಂಚಾಯ್ತಿಯ ಪ್ರಗತಿ.
ಭ್ರಾತೃತ್ವದ ದುಡಿಮೆಗೆ ಸಾಕ್ಷಿಯಾದ ನಿಮ್ಮ ಸಹಾನುಭೂತಿ ಸಹಕಾರ ತತ್ವ,
ಹಸಿರು ತುಂಬಿದ ಅಮೃತ ವನದಲ್ಲಿ
ಸಂಚರಿಸುವ ಜನರ ಹೃದಯಗಳು
ಪ್ರಶಾಂತತೆಯ ಸವಿಯ ಸವಿಯುತ
ಆಚರಿಸುತ್ತಿವೆ ಹಬ್ಬದ ಉತ್ಸವ.
ವಿಶ್ರಾಂತಿ ಬಯಸದ ನಿಮ್ಮ ಕಾಯಕ,
ಬಾನಂಗಳದಿ ಬೆಳಗುತಿದೆ
ಅಮೃತ ಗ್ರಾಮ ಪಂಚಾಯ್ತಿ ಎಂಬ ಹೆಸರಿನ ಫಲಕ.
ಸೂಕ್ಷ್ಮದಿ ಸಮಸ್ಯೆಯನರಿತು ಸರಳತೆಯಲ್ಲಿ ಜನಮನಕೆ ಸ್ಪಂದಿಸುವ ನಿಮ್ಮ ಸ್ನೇಹ ಸ್ವಭಾವ,
ಜನರ ಮನಗಳು ನೆನೆಯುವಂತೆ ಮಾಡಿದೆ ನೀವು ಕೊರತೆ ನೀಗಿಸಿರುವ ಕ್ಷಣವ.
ನಿಮ್ಮ ನೈಪುಣ್ಯತೆ ಜ್ಞಾನದಿಂದ ಗ್ರಾಮಗಳ ಸಮೃದ್ಧಿ ಗೊಳಿಸಲು ನೀವು ಕೈಗೊಂಡ ಕಾರ್ಯತಂತ್ರಗಳ ನೀತಿ,
ಸ್ಪೂರ್ತಿಯಾಗಿದೆ ನಮ್ಮೆಲ್ಲರಿಗೂ
ನಿಮ್ಮನ್ನ ಸರ್ಕಾರ ಆಮಂತ್ರಿಸಿರುವ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ.
- nagamani Kanaka
23 Oct 2021, 09:01 pm
Download App from Playstore: