ಕಂದಾಚಾರ
ಖರ್ಚು ವೆಚ್ಚವಿರುವ
ಬದುಕಿನ ಬಂಡಿ ಇರುವ
ಮನುಷ್ಯನಿಗೆ ಇಲ್ಲದ ಹುಂಡಿ
ಖರ್ಚು ವೆಚ್ಚವೇ ಇಲ್ಲದ
ಬದುಕಿನ ಬಂಡಿಯೇ ಇಲ್ಲದ
ದೇವರಿಗೆ ಏಕೆ ಬೇಕು
ದೇವರು ಹುಂಡಿ ಹುಂಡಿ
ತಿನ್ನದ ದೇವರಿಗೆ
ಹಣ್ಣು ತುಪ್ಪದ ಗೋಪುರ
ತಿನ್ನುವ ಮಾನವನ ಕೈಗೆ
ತೆಂಗಿನ ಕಾಯಿ ಚಿಪ್ಪು
ದೇವರು ಇರಲಿ
ದೇವಾಲಯವಿರಲಿ
ಶಾಂತಿಯ ತಾಣವಾಗಿರಲಿ
ಕಂದಾಚಾರದ
ಕಂದಕವಾಗದಿರಲಿ
- ರಾಜು ಹಾಸನ
06 Jan 2022, 11:50 pm
Download App from Playstore: