ಕನ್ನಡ ನಾಡ ಸಂಸ್ಕೃತಿ.

ತಾರೆಗಳ ತೋಟದಲ್ಲಿ ಅರಳಿನಿಂತ ಹೂವುಗಳೇ,
ತಾಯ ಹಾಲ ಋಣವು , ಕರೆ ನೀಡಿದ ಕೂಡಲೇ ,
ನಮ್ಮ ನಾಡ ಪೋರೆಯುವಂತ ಯುವ ಸೈನ್ಯಕೇ ಹರ್ಷದಿಂದ ಬೆಳಗುವೆವು ಜಯ ಮಂಗಳದಾರತಿ.

ಮಾತೃ ಹೃದಯ ಸ್ಮರಿಸುವಂತ ಸೇ ವೆಯನ್ನು ನೀಡುತ್ತಾ
ಹಸಿವು ನೀಗಿ ಸಲಹೋ ರೈತ ದುಡಿವ ಬೆವರು ಸುರಿಸುತ.
ನೆತ್ತರರಿಸಿ ನೆಲವ ಕಾಯೋ ಯೋಧರಿಗೆ ನಮಿಸುತ್ತಾ,
ನಾವು ಸಾಗಬೇಕು ಐಕ್ಯತೆಯ ಮಂತ್ರವನ್ನು ಸಾರುತ.

ಸರ್ವ ಧರ್ಮ ಸಮನ್ವಯದ ಜಾಗೃತಿ ದೀಪ, ಗಡಿಯಾಚೆ
ಬೆಳಗುತಿರಲಿ ಕನ್ನಡ ಧೀರರ ಪ್ರತಾಪ.
ಯಾತ್ರಿಕರನ್ನು ಆಕರ್ಷಿಸುವ ಮಲೆನಾಡ ಪ್ರಕೃತಿ,
ನಡೆನುಡಿಯಲ್ಲಿ ಮೆರೆಯುತ್ತಿದೆ ನಮ್ಮ ನಾಡ ಸಂಸ್ಕೃತಿ.

ಸಾಧುಸಂತರ ಪಾಠ ಮೌಢ್ಯವಳಿಸಿ ಮೂಡಿಸಿದೆ ನಮ್ಮೊಳಗೆ ವಿಶ್ವಪ್ರೇಮದ ಭ್ರಾತೃತ್ವ,
ವಚನಾಮೃತ ಭಕ್ತಿ ಸಾರ ಮಕ್ಕಳ ಮೊಳಗಿಸಿದೆ ಮಾತೆಯ ರಕ್ಷಣೆಗೆ.
ಜನಮನಗಳು ನೆನಪಿಡುವ ಸಾಧಕರ ಸಾಧನೆಯ ಸಾಲುಗಳ ಹೆಸರು,
ಒಂದಾಗಿ ಶ್ರಮಿಸಲು ತಿಳಿಸಿವೆ ನಮ್ಮ ನಾಡ ಪ್ರಗತಿ ಕೀರ್ತಿಗೆ.

- nagamani Kanaka

15 Jan 2022, 03:05 pm
Download App from Playstore: