ಒಳ್ಳೆಯ ಮನುಷ್ಯನಿಗೆ.
ಮನುಷ್ಯ ಒಳ್ಳೆಯ ದಾರಿಯಲ್ಲಿ
ನಡೆಯಲು ದೊಡ್ಡ ಅನುಭವ
ಮಹಾ ಪ್ರವಚನಗಳೇ ಬೇಕಿಲ್ಲ
ತನ್ನ ಬದಲಾವಣೆಗೆ ಚಿಕ್ಕದೊಂದು
ಸಂದರ್ಭ ಮಾತು ಸಿಕ್ಕಿದರೂ
ಬದಲಾಗುತ್ತಾನೆ ಮೂರ್ಖರು
ಎಂದೂ ಬದಲಾಗಲಾರರು
ಹಾಗಾಗಿ ಬುದ್ದಿವಂತರಿಗೆ
ಕೆಟ್ಟ ಅನುಭವ ಬೇಕಿಲ್ಲ
ಮೂರ್ಖರಿಗೆ ಹೇಳುವುದು
ತಿಳಿಯಲ್ಲ ಮಹಾರಾಜನಾದ
ಸಿದ್ದಾರ್ಥ ಬುದ್ಧನಾಗಲು
ನಾಲ್ಕು ನೋಟ ಸಾಕಾಯ್ತು
ಆದರೆ ಅಂತಹ ಶವ ರೋಗಿ
ಬಡವ ಇಂತಹವನ್ನು ದಿನಾ
ನೋಡುವ ನಾವ್ಯಾರು
ಬುದ್ಧನಾಗಿಲ್ಲ ಕೊನೆ ಪಕ್ಷ
ಯಾರಿಗೂ ವಂಚಿಸದೇ
ಮೋಸ ಮಾಡದೇ ಸಾರ್ಥಕ
ಬದುಕು ಸಾಗಿಸಿದರೆ ಸಾಕು
@ಮಲ್ಲಿಕಾರ್ಜುನ ಸೊನ್ನದ
- mallikarjun sonnad
23 Apr 2022, 11:10 pm
Download App from Playstore: