ಮನದಾಳದ ಮನ ಸಹೋದರಿ

ಮನಃಸಾಕ್ಷಿಗೆ ಮಾಯದ ಒಡವೆಯ ಹಾಕಿ
ಮೋಸದ ಜನರ ಬಲೆಗೆ ಬಿದ್ದು
ಅವರ ಹಿತವನ್ನು ರಕ್ಷಿಸುವುದೇ ನ್ಯಾಯವೆಂದರಿದು
ತನ್ನ ಮನಸ್ಸನ್ನೇ ಕೊಲೆಗೆಯುತ್ತಿರುವೆಯಲ್ಲ

ನಾಟಕೀಯ ಜನರಿಂದ ಪರದೆ ಎಳೆದು
ಅಹಂ,ಸ್ವಾರ್ಥದಲಿ ಮನವ ಮುಳುಗಿಸಿ
ಕೆಡಕುಗಾರರ, ದ್ರೋಹಿಗಳ ಅರಿದೆ ಹಿಂಬಾಲಿಸಿ
ಮರೆಹಿಂದಿನ ಒಳಿತು ಮನವ ಮರೆಮಾಚುತ್ತಿರುವೆಯಲ್ಲ

ಅನ್ಯಾಯ, ಮೋಸ,ಸ್ವಾರ್ಥ, ಅಹಂ
ಕೆಡಕು,ದ್ರೋಹ,ಹಗೆ ಹತ್ತುರಿಯುತ್ತಿದೆ
ಜಗತ್ತೇ ಬೆರಗಾಗುವಂತಹ ಮೋಸದ ಜಾಲದಲಿ
ಮನಸ್ಸಾಕ್ಷಿಯನ್ನೇ ಕಗ್ಗತ್ತಲೆಯಲಿ ದೂಡಿ ಮೆರೆಯುತ್ತಿರುವೆಯಲ್ಲ

ಅದೆಂದರಿಯುವುದೋ ಮನದಾಳದ ಒಳಿತಿನ ಸತ್ವವು
ವಿಜ್ರಂಭಿಸುವುದೆಂತೋ ದ್ರೋಹಿಗಳ ರುಂಡವನು ಸಂಹರಿಸಿ
ಮುಂದಾಗುವುದುಂಟು ಕಟುಕ,ಸ್ವಾರ್ಥಿಗಳ ಸಂಹಾರ
ಇದನಂಬಿ ತಾಳ್ಮೆಯಿಂದಿರುವೆನಯ್ಯ ನಿನ್ನ ಮನದಾಳದಲ್ಲಿ ಸಹೋದರಾ .......

- Shakuntala Shakuntala

27 Jun 2022, 11:50 am
Download App from Playstore: