ಕವನದ ಶೀರ್ಷಿಕೆ ಅಮೃತ ಮಹೋತ್ಸವ.

ಭಾರತಾಂಬೆಗೆ ನಡೆಯುತ್ತಿದೆ 75ರ ಸ್ವಾತಂತ್ರ್ಯದ ಅಮೃತ ಮಹೋತ್ಸವ,
ಕ್ರಾಂತಿ ವೀರರು ಕಣ್ತುಂಬಿಕೊಳ್ಳಲಾಗಲಿಲ್ಲ
ಈ ಹಬ್ಬದ ವೈಭವ.
ವ್ಯಾಪಾರಕ್ಕಾಗಿ ನಾಡಿಗೆ ಬಂದ ಬ್ರಿಟಿಷರು
ಭಾರತೀಯರನು ಪರತಂತ್ರರನ್ನಾಗಿಸಿ ದೇಶವ ಆಳತೊಡಗಿದರು.
ಭಾರತಾಂಬೆಯ ಬಿಡುಗಡೆಗೆ ನೆತ್ತರರಿಸಿದ ಅಂದಿನ ತರುಣರೀಗ,
ಪ್ರಜ್ವಲಿಸುತ್ತಿಹರು ಜನಮನಗಳೊಳಗೆ ಅವರ ಸಾಹಸ ಕಥೆಗಳ ನಾವು ಓದುವಾಗ.
ನೆಲದ ರಕ್ಷಣೆಗೆ ವೀರ ವನಿತೆಯರಿಗಿದ್ದ ಶೌರ್ಯ
ಕರೆದೊಯ್ಯುತ್ತಿತ್ತು ಅವರನ್ನು ಆಂಗ್ಲರು ಕೊಡುತ್ತಿದ್ದ ಕರಿನೀರಿನ ಕಠಿಣ ಶಿಕ್ಷೆಗೆ,
ಅಳುಕದೇ ಮುಂದಾಗಿ ಮಡಿದರು ತಾಯಿಯ ಉಳಿವಿಗೆ.
ನಾಡ ಸೇವೆಗೆ ಸಿದ್ಧರಾದ ಶೂರರು,
ಹೆಸರಾಗಿರುವ ರಿಂದು ನಮ್ಮ ರಾಷ್ಟ್ರ ಧ್ವಜದ ಪಥಾಕೆಗೆ.
ಇಂದು ಗೌರವಿಸುತ ಸ್ಮರಿಸುವ ಕೆಚ್ಚೆದೆಯ ಕಲಿಗಳ ದೇಶಭೀಮಾನವ,
ಸ್ವತಂತ್ರರಾಗಿರುವ ನಾವು ಹುತಾತ್ಮರಿಗೆ ಶ್ರದ್ಧೆಯಿಂದರ್ಪಿಸುವ ಸಾವಿರ ಪ್ರಣಾಮವ.
ವಿಶ್ವಗುರುವಾಗೋ ಕನಸು ಹುತ್ತ ತಾಯಿಗೆ
ನಡೆಯುತ್ತಿದೆ ಇಂದು ಸ್ವಾತಂತ್ರ್ಯೋತ್ಸವ,
ಕನಸ ನನಸು ಮಾಡುವ ಪ್ರಜೆಗಳೇ,
ಶಪಥದೊಂದಿಗೆ ಆಚರಿಸುವ ಬನ್ನಿ ಜಗದ ಬೆಳಕು ಭಾರತವೆಂಬ ಅಮೃತ ಮಹೋತ್ಸವ.

- nagamani Kanaka

15 Aug 2022, 06:58 am
Download App from Playstore: