ದುಃಖ


ಮನವು ನೋಯುತಿದೆ
ಮನಸ್ಸನ್ನೇ ಯಾರೋ
ಮುಷ್ಟಿಯೊಳಗಾಗಿಸಿದ ಅನುಭವ
ಬಯಸಿದ್ದು ಸಿಗದಾಗಲೂ
ಸಿಗುವಂತದ್ದು ವಿರಳವಾದರೂ
ಮನಸ್ಸಿಗೆ ಅರ್ಥವಾಗುವುದೇ ಇಲ್ಲ
ಹಂಬಲಿಸುತ್ತಿದೆ
ಹಾತೊರೆಯುತ್ತಿದೆ
ತನ್ನ ನೋವನ್ನು ಯಾರೊಂದಿಗೆ
ಹಂಚಲಿ ?
ಮರುಗುವ ಮನವ
ಸಂತೈಸಿ
ತಂಗಾಳಿಯ ಸಂದೇಶ ಹರಡಿ ಸಾಂತ್ವವನ್ನೀಯಲು ಯಾರಿಗೆಲ್ಲ ಸಾಧ್ಯವಿದೆ ?
ದುಃಖಗಳ ಸಾಮ್ರಾಜ್ಯವ
ಭೇದಿಸಿ
ಸಂತೋಷರಾಜ್ಯ ನಿರ್ಮಾಣ ಮಾಡಿ
ಜಯಗಳಿಸುವವರೇ ನೈಜ
ಜಯಶಾಲಿಗಳು
ಅದಕ್ಕೆ ದೊರಕುವ ಪರಿಸರವೇ "ವರ"
ವರವಿಲ್ಲದ ಪಯಣದ
ಕಾರ್ಯ ಸಾಧನೆಯು ಅಸಾಧ್ಯ...

- ಶಾಹಿದ್ ಉಪ್ಪಿನಂಗಡಿ

20 Aug 2016, 08:22 am
Download App from Playstore: