ಭಾರತರತ್ನ ಅಂಬೇಡ್ಕರ್ ಸಾಹೇಬರು...

ಬಡತನದ ಕುಲುಮೆಯಲ್ಲಿ ಬೆಂದು
ವಿದ್ಯೆಯ ಜ್ಞಾನ ದೇಗುಲದಲ್ಲಿ ಮಿಂದು
ಐಕ್ಯತೆ ಸೌಹಾರ್ದತೆ ವಿಧೇಯತೆ
ಸಮಪಾಲು ಸಮಬಾಳು ಸಮಾನತೆಯ
ಇದೋ ಬಾಬಾ ಸಾಹೇಬರಿಗೆ ನಮನ.

ಕಷ್ಟ ನೋವುಗಳ ಮಧ್ಯದಲ್ಲಿ
ಹರಿಯುವ ನದಿಯಂತೆ
ಸ್ವಚ್ಛಂದವಾಗಿ ಚಲಿಸುವಿಕೆ ಅಲ್ಲಿ ಮುನ್ನುಗ್ಗುವನಂತಹ
ಇದೋ ಬಾಬಾ ಸಾಹೇಬರಿಗೆ ನಮನ.

ಸಮಾಜದ ಸೇವೆಗೆ ಮುಂದಾಗಿ
ಜೀವನವ ಮುಡಿಪಾಗಿಸಿದ
ದೀನ ದಲಿತರ ಸಿಂಧು ವಾಗಿ
ಭಾರತಕ್ಕೆ ರತ್ನವೆನಿಸಿದ
ಇದೋ ಬಾಬಾ ಸಾಹೇಬರಿಗೆ ನಮನ.

ಬರಹದ ಹರಿತದಿಂದ
ಶೋಷಿತ ವರ್ಗಗಳ ಕಣ್ಮಣಿಯಾಗಿ
ಜ್ಞಾನದ ಖಣಿಯಾಗಿರುವ
ಬ್ರಹ್ಮನ ಯುಕ್ತಿಯ ಹೆಚ್ಚಿಸಿದ
ಇದೋ ಬಾಬಾ ಸಾಹೇಬರಿಗೆ ನಮನ.

ಛಲವೆಂಬ ಹೂಲವನ್ನು ಹೊತ್ತು
ಬುದ್ದಿಬಲವೆಂಬ ಬೀಜವನ್ನು ಭಿತ್ತಿ
ಫಸಲಿನ ಶಕ್ತಿಯಲ್ಲಿ ಭಲ ಭೀಮನಾಗಿ
ಸಂವಿಧಾನದ ಶಿಲ್ಪಿಯಾಗಿರುವ
ಇದೋ ಬಾಬಾ ಸಾಹೇಬರಿಗೆ ನಮನ.

ದುಃಖದುನ್ಮಾನಗಳನ್ನು ಸಹಿಸುತ್ತಾ
ಅವಮಾನವನ್ನು ಹೆದರಿಸುತ್ತಾ
ತಾರತಮ್ಯವನ್ನು ಬಿಡಿಸುತ್ತಾ
ಸಮಾನತೆಯ ಹರಿಕಾರನಾಗಿರುವ
ಇದೋ ಬಾಬಾ ಸಾಹೇಬರಿಗೆ ನಮನ.

ಹೆಚ್ಚು ಪದವಿಯನ್ನು ಪಡೆದುಕೊಂಡು
ಅಪಾರ ಜ್ಞಾನವ ತುಂಬಿಕೊಂಡು
ಭಾರತೀಯರ ದಿವ್ಯ ಶಕ್ತಿಯಾಗಿ
ಶ್ರೇಷ್ಠ ವಿದ್ಯಾವಂತ ರೇನಿಸಿಕೊಂಡ
ಇದೋ ಬಾಬಾ ಸಾಹೇಬರಿಗೆ ನಮನ.

ನ್ಯಾಯವೆಂಬ ಪದವಿಯ ಪಡೆದು
ಜನರ ಹಿತಕ್ಕೆ ಹಗಲಿರುಳು ಶ್ರಮಿಸುತಾ
ತಾಯಿ ರೂಪದೀ ಬೆಳಕನ್ನು ಚೆಲ್ಲುವ
ಸ್ವಚ್ಛ ಮನಸ್ಸಿನ ಭವ್ಯ ಪುರುಷರಾದ
ಇದೋ ಬಾಬಾ ಸಾಹೇಬರಿಗೆ ನಮನ.

✍️ವಿ.ಎಸ್ಸ್.ಎಚ್ಚ್.....
ಪ್ರಾ.ಆ.ಸು.ಅಧಿಕಾರಿ.

- v.s.h

29 Jun 2025, 03:02 am
Download App from Playstore: