ಆಯುರ್ವೇದ

ಹಾಳುಗೆಡದಿರು ಮನುಜ ಮಾಣಿಕ್ಯದಂತಹ ಬದುಕನ್ನು,
ತಾಳವಿಲ್ಲದ ಜೀವಕೆ ನವೀನತೆಯ ರಂಗುಚೆಲ್ಲಿ,
ಸೃಷ್ಟಿ ಸ್ಥಿತಿಗತಿಯ ಮರೆತೆಯೇನು?
ಸಸ್ಯ ಸಂಕುಲವ ತೊಳಿದು ನೀನು!
ದೇವ ಧನ್ವಂತರಿಯ ವರಪ್ರಸಾದವಿದು
ಆಚಾರ್ಯ ಚರಕರಿಂದ ಬಂದ ಬಳುವಳಿಯು ಇದುವು.
ಜೀವಸಂಕುಲಕೆ ಪರಮ ಅಮೃತವು ಇದುವು
ನವ ನವೀನತೆಯ ಲೇಪಹಾಕಿ ಹೊಸಿದು ಹಾಕದಿರು ಮನುಜ.
ಪರಂಪರಗತವಾಗಿ ಬಂದ ನಮ್ಮ ಈ ಸಂಸ್ಕೃತಿಯ,
ಜೀವ ಜ್ಯೋತಿ ಬೆಳಗುವ ಈ ಆಯುರ್ವೇದವ.
- ಶ್ರೀದೇವಿ ಉದಯ್ ಆತ್ರಾಡಿ

- Shridevi

20 Sep 2025, 06:26 am
Download App from Playstore: