ನನ್ನಜ್ಜಿ

ಕುದುರೆ ಏರಿ ಬಂದ ರಾಜಕುಮಾರ
ಅವನಿಗೆ ಮನಸೊತಳು ನನ್ನಜ್ಜಿ ಸರಳ
ಮದುವೆ ಸಂಸ್ಕಾರದ ಜೀವನ ನಡೆಸುತಲಿರಲು
ಬಿರುಗಾಳಿಯೇ ಬಿಸಿತೊಮ್ಮೆ ಜೀವನದ ಹಾದಿಯಲಿ.


ಊರು ಬಿಟ್ಟು ಊರಿಗೆ ನಾಲ್ಕು ಮಕ್ಕಳ
ಕಟಗೊಂಡು ಜೀವನಾ ನಡಸ್ತೀದಾಳ
ಹರಕ ಸಿರಿ ಹರಕ ಪೋಲಕಾ ತಿನ್ನಾಕ ಕೂಳಿಲ್ಲ
ಮಲಗಾಕ ಸೂರ ಇಲ್ಲ ಆದರೂ ಗಂಡೆದೆಯವಳು.

ಗಿರಣಿ ಮುಂದ ಕುಂತಾಳ ಹಿಟ್ಟ ಬೆಡ್ಯಾಳ
ತಂದ ಹಿಟ್ಟನ್ಯಾಗ ರೊಟ್ಟಿ ಮಾಡ್ಯಾಳ
ರೊಟ್ಟಿಯೊಳಗ ಅದೆಂತ ರುಚಿ ಅಂತೀರಿ
ಅಮೃತನು ಅಸುಯ್ಯಾ ಪಟ್ಕೊಳುಹಂಗಯಿತ್ತ.

ಪ್ರೀತಿ ಮಮತೆ ನೀಡ್ತಾನೆ ಮಕ್ಕಳಗೆ ಸಂಸ್ಕಾರ
ಕಲಸ್ಯಾಳ, ಮುತ್ತಿನಂತ ಮಕ್ಕಳೀಗ ಮುದಕಿನ ದುರತಳ್ಳ್ಯಾರ ಕಸರಿಲ್ಲದ ಪ್ರೀತಿಯೊಳಗ ಕಲ್ಲ ಹುಡ್ಕೊ ಮಕ್ಳಿoದ ನೋವುಂಡು ಯಮನ ಪಾದಾ ಸೆರ್ಯಾಳ.

- ಮೇಘಾ ಬೆಳಧಡಿ

28 Sep 2025, 12:07 am
Download App from Playstore: