ದುಂಡಾದ ದೋಣಿ ಬಿಟ್ಟು...

ದುಂಡಾದ ದೋಣಿ ಬಿಟ್ಟು
ಅದರೊಳಗೆ ಜೀವಿಗಳಿಟ್ಟು
ಉಸಿರಾಡೋ ಗಾಳಿ ನೀರನಿಟ್ಟು
ನದಿ ಸಾಗರ ಸಮುದ್ರ ಗಳಿಟ್ಟು
ಅವುಗಳಿಗೆ ಅಸಿವನಿಟ್ಟು..
ಪಶು ಪಕ್ಷಿ ಪ್ರಾಣಿಗಳನಿಟ್ಟು
ಶಿವನ ಅಂಕುಶದೊಳ್
ಆಟವಾಡುತಾನೋ ಶಿವನು....

ಹೂ ಹಣ್ಣು ಮಾಡಿಬಿಟ್ಟೆ ಸಿಹಿಕಹಿ ತುಂಬಿದೆ
ದೊಡ್ಡ ಕಾನನ ದೊಡ್ಡ ಪ್ರಾಣಿಗಳ ತುಂಬಿದೆ
ಮನದೊಳಗೆ ಅಸೆಯ ಹುಚ್ಚು ತುಂಬಿದೆ
ಬೆಳ್ಳಿ ಬಂಗಾರ ಮಾಡಿಬಿಟ್ಟೆ ಅಸೆ ತುಂಬಿದೆ
ಇವೆಲ್ಲವನ್ನೂ ಮೇಲೆ ನೋಡುತ..ಶಿವನು
ಚಂದದೊಂದು ಆಟವಾಡುತಾನೋ

ಮಾನವನ ಸೃಷ್ಟಿ ಮಾಡಿದ ಮಹಾದೇವ
ಮಾನವನಿಗೆ ಬುದ್ದಿ ಬಲವ ನೀಡಿ ದೇವ
ಸಾವು ನೋವು ಚಿಂತೆ ಸೃಷ್ಟಿದೆ ದೇವ
ಬೆಟ್ಟಕೆ ಹೋಗಿ ತಂದ ಕಲ್ಲಿge ಪ್ರಾರ್ಥನೆ
ದೋಪ ನೈವೇದ್ಯ ಪೂಜೆಯ ಪ್ರಾರ್ಥನೆ
ಹಣವೆಂಬ ಮಾಯಯ ಮಾಡಿದೆ ದೇವ
ವ್ಯಾಪಾರ ಅಸೆ ದುರಾಸೆ ಹಚ್ಚಿದೆ ದೇವ
ಇದೇಲ್ಲವನ್ನು ಮೇಲೆ ನಿಂತು ನೋಡುವ
ಚಂದದೊಂದು ಶಿವ ಆಟವಾಡುತಾನೋ.....

✍️ವೀರೇಶಪ್ಪ ವಿ ಕುಂಬಾರ ಖೈರವಾಡಗಿ



- Veereshappa v khairawadagi

01 Jul 2026, 09:55 pm
Download App from Playstore: